ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಭದ್ರಾನದಿಯ ತಟದಲ್ಲಿ ಈಶ್ವರ ಲಿಂಗ ಹಾಗೂ ಬಸವ ಮೂರ್ತಿಗಳಿಗೆ ಪ್ರಥಮ ಪೂಜೆ ಸಲ್ಲಿಸಿದರು. ನಂತರ ನದಿತೀರದಲ್ಲಿ ನಿರ್ಮಿಸಿದ್ದ ಕುಟೀರದಲ್ಲಿ ರುದ್ರಾಭಿಷೇಕ, ಲೋಕಕಲ್ಯಾಣಾರ್ಥ ಇಷ್ಟಲಿಂಗ ಮಹಾಪೂಜೆಯನ್ನು ನೆರವೇರಿಸಿ, ಸಾವಿರಾರು ಭಕ್ತರಿಗೆ ದರ್ಶನ ನೀಡಿದರು.