‘ಅನಾರೋಗ್ಯದಿಂದ ಬಳಲುತ್ತಿದ್ದ ಆನೆಯ ದೃಷ್ಟಿ ಮಂದವಾಗಿತ್ತು. ಆನೆಯನ್ನು ಕಂಡಿರುವ ದಿನವೇ ಅರಣ್ಯ ಇಲಾಖೆಗೆ ವಿಷಯ ತಿಳಿಸಲಾಗಿತ್ತು. ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು, ಹೆಚ್ಚಿನ ಚಿಕಿತ್ಸೆಗೆ ಆನೆಯನ್ನು ಸಕ್ರೆಬೈಲ್ಗೆ ಕರೆದೊಯ್ಯಲು ತಾಂತ್ರಿಕ ಪ್ರಕ್ರಿಯೆ ನಡೆಸುತ್ತಿರುವುದಾಗಿ ಹೇಳಿದ್ದರು. ತಕ್ಷಣ ಚಿಕಿತ್ಸೆ ದೊರಕಿದ್ದರೆ, ಆನೆಯನ್ನು ಉಳಿಸಿಕೊಳ್ಳಬಹುದಿತ್ತು’ ಎಂದು ಸ್ಥಳೀಯ ರಾಘವೇಂದ್ರ ನಾಯ್ಕ ಪ್ರತಿಕ್ರಿಯಿಸಿದರು.