‘ಅವರ ಆಡಳಿತದ ಅವಧಿಯಲ್ಲಿ ಮುಸ್ಲಿಮರಿಗೆ, ಜೈನರಿಗೆ, ಶೈವರಿಗೆ ಸೇರಿದಂತೆ ಇನ್ನಿತರ ಕವಿಗಳಿಗೆ ಆಶ್ರಯ ನೀಡಲಾಗಿತ್ತು. ಪಂಪ, ರನ್ನ, ಪೊನ್ನ, ಶಿವಕೋಟಾಚಾರ್ಯ ಮತ್ತು ಕವಿರಾಜ ಮಾರ್ಗ ಕೃತಿ ರಚಿಸಿ ಶ್ರೀವಿಜಯ ರಾಷ್ಟ್ರಕೂಟರ ಆಡಳಿತದಲ್ಲಿ ಆಶ್ರಯ ಪಡೆದಿದ್ದರು. ಹಿಂದೂ, ಜೈನ, ಇಸ್ಲಾಂ ಸೇರಿದಂತೆ ಇನ್ನಿತರ ಧರ್ಮಗಳನ್ನು ಬೆಳೆಸಿದ್ದರು. ಸೇಡಂ, ಮಳಖೇಡನಲ್ಲಿ ಅನೇಕ ಜೈನ ಬಸಿದಿಗಳನ್ನು ರಾಷ್ಟ್ರಕೂಟರು ನಿರ್ಮಿಸಿದ್ದಾರೆ. ಅನೇಕ ಶಿಲಾಶಾಸನಗಳಲ್ಲಿ ಧರ್ಮ ಮತ್ತು ಆಡಳಿತದ ಕುರಿತು ಕಾಣಬಹುದಾಗಿದೆ’ ಎಂದರು.