ಮೈಸೂರಿನ ಕೆ.ಆರ್.ಆಸ್ಪತ್ರೆ ತಜ್ಞ ವೈದ್ಯರು ತಪಾಸಣೆ ನಡೆಸಿದರು. 150 ಮಂದಿ ಮೂಳೆ, 120 ಮಂದಿ ಚರ್ಮ ಕಾಯಿಲೆ, 111 ಮಂದಿ ಕಣ್ಣಿನ ಸಮಸ್ಯೆ, 43 ಮಂದಿ ಮೂಗು ಮತ್ತು ಶ್ರವಣ ಸಮಸ್ಯೆ, 52 ಮಂದಿ ಮಹಿಳೆಯರು, 68 ಮಕ್ಕಳು ಸೇರಿದಂತೆ ಒಟ್ಟು 569 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಈ ಪೈಕಿ ವಿವಿಧ ಖಾಯಿಲೆಯಿಂದ ಬಳಲುತ್ತಿರುವ 25 ಮಂದಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲು ವೈದ್ಯರು ಶಿಫಾರಸು ಮಾಡಿದರು.