‘ಕ್ರಿಯಾಶಕ್ತಿ, ಜ್ಞಾನಶಕ್ತಿ ಪ್ರತೀಕವಾಗಿ ವೀರಶೈವ ಲಿಂಗಾಯತ ಧರ್ಮ ಬೆಳೆದು ಬಂದಿದೆ. ಧರ್ಮತತ್ವದಲ್ಲಿ ಈಗ ಎರಡು ಪಂಥಗಳನ್ನು ಹುಟ್ಟುಹಾಕುವ ಉದ್ದೇಶ ಇಟ್ಟುಕೊಂಡೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಷಡ್ಯಂತ್ರ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಸಂಚು ರೂಪಿಸುವ ಉದ್ದೇಶದಿಂದಲೇ ಸಮಿತಿ ರಚಿಸಿ ಅವರಿಗೆ ಬೇಕಾದಂತಹವರನ್ನು ಸಮಿತಿ ಯಲ್ಲಿ ನೇಮಿಸಿದ್ದಾರೆ. ಸಮಿತಿಯಲ್ಲಿ ಎರಡೂ ಗುಂಪಿನ ಪಂಡಿತರನ್ನು, ಧರ್ಮ ಸಹಿಷ್ಣರನ್ನು ಸರ್ಕಾರ ನೇಮಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳು ವಂತಹ ಕಾರ್ಯ ಮಾಡಿಲ್ಲ’ ಎಂದರು.