‘ಅಧಿಕೃತ ಎಡಪಕ್ಷಗಳು ಭಗತ್ ಸಿಂಗ್ನನ್ನು ಮರೆತಿವೆ’ ಎಂಬ ಅವರ ಮಾತು ಕೂಡ ಸತ್ಯಕ್ಕೆ ದೂರವಾಗಿದೆ. ಕಮ್ಯುನಿಸ್ಟ್ ಪಕ್ಷಗಳ ಕಚೇರಿ ಮತ್ತು ಕಾರ್ಯಕ್ರಮಗಳಲ್ಲಿ ಭಗತ್ ಸಿಂಗ್ ಚಿತ್ರ
ರಾರಾಜಿಸುತ್ತದೆ. ಹಾಗೆಯೇ ಡಾ. ಜಿ. ರಾಮಕೃಷ್ಣ ಅವರು ಬರೆದಿರುವ, ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ‘ಭಗತ್ ಸಿಂಗ್ರ ಜೀವನ ಚರಿತ್ರೆ’ಯ ಸುಮಾರು 60 ಸಾವಿರ ಪ್ರತಿಗಳಾದರೂ ಮಾರಾಟವಾಗಿವೆ. ಇದೇ ಪ್ರಕಾಶನ ಪ್ರಕಟಿಸಿದ, ಭಗತ್ ಸಿಂಗ್ ಬರೆದ ‘ನಾನೇಕೆ ನಾಸ್ತಿಕ’ ಕೃತಿಯು 14ನೇ ಮುದ್ರಣ ಕಂಡಿದೆ. ಹೀಗಿರುವಾಗ ಗುಹಾ ಅವರ ಮಾತಿಗೆ ಯಾವುದೇ ಅರ್ಥವಿಲ್ಲ.