ಶೃಂಗೇರಿ ಕ್ಷೇತ್ರ ಸಂಚಾಲಕ ವಸಂತ್ ಕುಮಾರ್ ಮಾತನಾಡಿ, ‘ಶೃಂಗೇರಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಮತದಾರರು ಇದ್ದು, ಸಾಗರ್ ಬಣ ಕ್ಷೇತ್ರದಾದ್ಯಂತ ಸುಮಾರು 71 ಶಾಖೆಗಳನ್ನು ಹೊಂದಿದೆ. 7,210 ಸದಸ್ಯರು ಇದ್ದು, ಸಂಘಟನೆ ಯಾವುದೇ ರಾಜಕೀಯ ಉದ್ದೇಶ ಹೊಂದಿಲ್ಲ’ ಎಂದರು. ಬಿಎಸ್ಪಿ ಪಕ್ಷ ದಲಿತರಿಗೆ ಮೋಸ ಮಾಡಿದ್ದು, ಅವರಿಗೂ ನಮ್ಮ ಬೆಂಬಲವಿಲ್ಲ. 10 ದಿನಗಳ ನಂತರ ಕ್ಷೇತ್ರದ ಮೂರು ತಾಲ್ಲೂಕು, ಖಾಂಡ್ಯ ಹೋಬಳಿ ಸಮಿತಿಯ ಮುಖಂಡರೊಂದಿಗೆ ಚರ್ಚಿಸಿ ಯಾವ ಅಭ್ಯರ್ಥಿಗೆ ಮತ ಹಾಕಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.