ಸಮಾಜ ಕಲ್ಯಾಣ ಇಲಾಖೆಯ ಬಿ.ಎನ್.ರಾಟಿ ಮಾತನಾಡಿ, ‘ಬಾಬು ಜಗಜೀವನರಾಮ್ ಅವರು ದೇಶ ಕಂಡ ಒಬ್ಬ ಅಪ್ರತಿಮ ನಾಯಕರಾಗಿದ್ದರು. ಅವರ ದೂರದೃಷ್ಟಿ ದೇಶವನ್ನು ಇಂದಿಗೂ ಮುನ್ನಡೆಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ’ ಎಂದು ಹರ್ಷ ವ್ಯಕ್ತಪಡಿಸಿದರು.ಲಕ್ಷ್ಮಣ ತಗಡಿನಮನಿ, ರಾಮಚಂದ್ರ ಗಾರವಾಡ, ಲಕ್ಷ್ಮಣ ಮುಂಡವಾಡ, ಬಿ.ಎಫ್.ಈಟಿ, ನಾಗರಾಜ ಹೊಸಮನಿ, ಹನಿಮಂತ ಗುಡಗೇರಿ, ಬಿ.ಎಚ್.ಮಲಕಬಾವಿ, ಮಂಜು ದೊಡ್ಡಮನಿ, ರಾಮು ದೊಡ್ಡಮನಿ, ಎಚ್.ಎಚ್.ಹರಿಜನ, ದಂಡೆಪ್ಪ ಹರಿಜನ ಹಾಜರಿದ್ದರು.