ಚಿಕ್ಕಮಗಳೂರು: ತಾಲ್ಲೂಕಿನ ಹಂಪಾಪುರ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದಿಂದ ಗ್ರಾಮದಲ್ಲಿ ಜೋಡಿ ಎತ್ತಿನ ಗಾಡಿ ಓಟ ರಾಜ್ಯ ಮಟ್ಟದ ಸ್ಪರ್ಧೆ ಭಾನುವಾರ ನಡೆಯಿತು.
ಗ್ರಾಮದ ಮುಖಂಡ ಮರಿಸಿದ್ದೇಗೌಡ, ಬೆಟ್ಟೇಗೌಡ, ಲಕ್ಕೇಗೌಡ ಅವರು ಸ್ಪರ್ಧೆಗೆ ಚಾಲನೆ ನೀಡಿದರು. ಎತ್ತಿನ ಗಾಡಿ ಸಾಗುವ ಮಾರ್ಗದ ಎರಡು ಬದಿಯಲ್ಲಿ ಮರದ ಮರದ ತುಂಡುಗಳಿಂದ ತಡೆಗೋಡೆ ನಿರ್ಮಿಸಲಾಗಿತ್ತು. ಮಾರ್ಗದ ಬದಿಯಲ್ಲಿ, ಸುತ್ತಲಿನ ಕಟ್ಟಡದ ಮೇಲೆ ನಿಂತು ಜನರು ಎತ್ತಿನ ಗಾಡಿ ಓಟ ವೀಕ್ಷಿಸಿದರು..
‘ವಿರೂಪಾಕ್ಷೇಶ್ವರ ದೇವರ ಪೂಜೆಯಿಂದ ಗ್ರಾಮದಲ್ಲಿನ ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿದೆ. ಉತ್ತಮ ಪೈರು ಬಂದಿದೆ. ಜಾತ್ರೆಯನ್ನು ರೈತರು ಸುಗ್ಗಿಯಂತೆ ಆಚರಿಸಿ ಸಂತೋಷ ಪಡುತ್ತಿದ್ದಾರೆ’ ಎಂದು ಗ್ರಾಮದ ಮುಖಂಡ ಎಚ್.ಪಿ.ಮಂಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.