ಪ್ರತಿ ಯುವಕನೂ ದುಡಿದು ತಿನ್ನುವಂತೆ ಮಾಡುವೆ. ಯಾರಿಗೂ ಉಚಿತವಾಗಿ ಆಹಾರ ಸಾಮಗ್ರಿ ಕೊಡದೆ, ಯುವಕರನ್ನು, ಬಡವರನ್ನು ಸೋಮಾರಿಗಳನ್ನಾಗಿ ಮಾಡುವುದಿಲ್ಲ. ಕ್ರೀಡೆಗೆ ಪ್ರೋತ್ಸಾಹ, ಓದುವವರಿಗೆ ಸಹಾಯಧನ ಒದಗಿಸುವೆ. ಪ್ರತಿಯೊಬ್ಬರೂ ಚಟುವಟಿಕೆಯ ಜೀವನ ನಡೆಸುವಂತೆ ಮಾಡುವೆ. ಜನಪ್ರತಿನಿಧಿಗಳು ಕ್ಷೇತ್ರದಲ್ಲೇ ಇರುವಂತೆ ಕಡ್ಡಾಯ ಮಾಡುವೆ. ಟಿಎ,ಡಿಎ ಎಲ್ಲಾ ಬಂದ್ ಮಾಡಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವೆ.