ಕುರುಬ ಸಮಾಜದ ಜನರು ಹೆಚ್ಚಾಗಿ ಇರುವ ಗ್ರಾಮಗಳಲ್ಲಿ ವಿಶ್ವನಾಥ್ ಪ್ರಚಾರ ನಡೆಸುತ್ತಿದ್ದರು. ಮಂಚನಹಳ್ಳಿಗೆ ಬಂದೊಡನೆ ಗ್ರಾಮಸ್ಥರು ಅವರ ಕಾರು ತಡೆದು ಗ್ರಾಮದೊಳಗೆ ಕಾಲಿಡದಂತೆ ಆಗ್ರಹಿಸಿದರು. ಕಾರಿನಿಂದ ಕೆಳಗಿಳಿದು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ವಿಶ್ವನಾಥ್ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.