ಬೆಂಗಳೂರು: ಬಸವೇಶ್ವರ ಜಯಂತ್ಯುತ್ಸವದ ಅಂಗವಾಗಿ ಬಸವಣ್ಣ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿರುವ ರಾಜಕೀಯ ಮುಖಂಡರು ವಚನಗಳ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಕೋರಿದ್ದಾರೆ.
'ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದಿದ್ದಾರೆ ಅಣ್ಣ ಬಸವಣ್ಣ. ಕರುನಾಡು ತನ್ನ ಆಚಾರ ವಿಚಾರಗಳೊಂದಿಗೆ ಮತ್ತೆ ಸ್ವರ್ಗದಂತಾಗಲಿ...' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.