ಈಗ ಇರುವ ಫಸಲಾದರೂ ಉಳಿದರೆ ಬೆಳೆಗೆ ಹಾಕಿದ ಬಂಡವಾಳವಾದರೂ ಹಿಂದಿರುಗಬಹುದು ಎಂದು ಬೆಳೆಗಾರರು ಯೋಚಿಸು
ತ್ತಿರುವಾಗಲೆ, ಅಧಿಕ ಉಷ್ಣಾಂಶದಿಂದ ಕಾಯಿ ಉದುರುತ್ತಿದೆ. ಮಾವಿನ ಬೆಳೆಯಲ್ಲಿ ಹೀಚು ಉದುರುವುದು ಸಾಮಾನ್ಯ ಎಂದು ತೋಟಗಾರಿಕಾ ತಜ್ಞರು ಹೇಳುತ್ತಾರೆ. ಆದರೆ ದೊಡ್ಡ ಗಾತ್ರದ ಕಾಯಿಗಳೇ ಉದುರಿ ಮಣ್ಣುಪಾಲಾಗುತ್ತಿವೆ. ಸ್ಥಿತಿ ಹೀಗೆಯೇ ಮುಂದುವರಿದರೆ ಮರದಲ್ಲಿ ಉಳಿಯುವುದೇನು ಎಂಬುದು ಬೆಳೆಗಾರರ ಪ್ರಶ್ನೆ.