<p><strong>ಮಂಗಳೂರಿನಲ್ಲಿ ಅನೇಕ ಬಾರಿ ಗೋಲಿಬಾರ್</strong></p>.<p><strong>ಮಂಗಳೂರು, ಏ. 20–</strong> ಮಂಗಳೂರು ಬಂದರು ಪ್ರದೇಶದಲ್ಲಿ ಇಂದು ಲೂಟಿ, ಗಲಭೆ, ಬೆಂಕಿ ಹಚ್ಚುವ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದ ಉದ್ರಿಕ್ತ ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮುಂತಾದ ಯತ್ನಗಳಲ್ಲಿ ವಿಫಲರಾದ ಪೋಲೀಸರಿಂದ ಅನೇಕ ಸುತ್ತು ಗೋಲಿಬಾರ್, ಒಬ್ಬರು ಬಲಿ, 40 ಮಂದಿಗೆ ಗಾಯ.</p>.<p>ನಿನ್ನೆ ಎರಡು ವಿರುದ್ಧ ಗುಂಪುಗಳ ನಡುವೆ ಸಂಭವಿಸಿದ ಘರ್ಷಣೆಯ ಪರಿಣಾಮವಾಗಿ ಉದ್ಭವಿಸಿದ ಉಗ್ರ ಪರಿಸ್ಥಿತಿಯನ್ನು ಹತೋಟಿಗೆ ತರಲು ನಿನ್ನೆ ರಾತ್ರಿ ಸಹ ಪೋಲೀಸರಿಂದ ಎರಡು ಕಡೆ ಗೋಲಿಬಾರ್, ಆದರೂ ಇಂದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಶಾಂತಿ ಸಮಿತಿ ಸಭೆ ಸಮಾವೇಶಗೊಂಡ ನಂತರ ಈ ದಿನ ಸಂಜೆ 7 ಗಂಟೆಯಿಂದ ನಾಳೆ ಬೆಳಿಗ್ಗೆ 7 ಗಂಟೆಯವರೆಗೆ (12 ಗಂಟೆಗಳ ಕಾಲ) ಕರ್ಫ್ಯೂ ಜಾರಿಗೆ ತರಲಾಯಿತು.</p>.<p><strong>ಟ್ರೈನ್ಗೆ ತಡೆ</strong></p>.<p><strong>ಕೋಟೇಕರ್, ಏ. 20–</strong> ಮಂಗಳೂರು ಗಲಭೆಗಳ ಕಾರಣದಿಂದ ‘ನಾನ್ಸ್ಟಾಪ್’ ಎಕ್ಸ್ಪ್ರೆಸ್ ಟ್ರೈನ್ಗಳನ್ನು ಉಲ್ಲಾಳದಲ್ಲಿ ತಡೆದು ನಿಲ್ಲಿಸಲಾಗಿದೆ. ಗಲಭೆಗಳಲ್ಲಿ ಒಂದು ಪಕ್ಷದ ಬೆಂಬಲಿಗರೆಂದು ಹೇಳಲಾಗಿರುವ ಮಲಬಾರ್ನಿಂದ ಬರುತ್ತಿದ್ದ ಒಂಬತ್ತು ಜನರನ್ನು ತಲಪಾಡಿಯಲ್ಲಿ ಬಂಧಿಸಲಾಗಿದೆ. ಮಲಬಾರ್ನಿಂದ ಬರುತ್ತಿರುವ ಎಲ್ಲ ಬಸ್ ಮತ್ತು ಕಾರ್ಗಳನ್ನು ಶೋಧಿಸಲಾಗುತ್ತಿದೆ.</p>.<p><strong>ಹಿಂಸೆ ನಿಲ್ಲಿಸಿ ಶಾಂತಿ ಸ್ಥಾಪಿಸಿ: ಎಸ್ಸೆನ್</strong></p>.<p><strong>ಬೆಂಗಳೂರು, ಏ. 20–</strong> ‘ಹಿಂಸೆಯನ್ನು ನಿಲ್ಲಿಸಿ, ಶಾಂತಿಯನ್ನು ಸ್ಥಾಪಿಸಿ, ಕಾನೂನನ್ನು ಗೌರವಿಸಿ’ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ಮತೀಯ ಗಲಭೆಯಿಂದ ಬಾಧಿತವಾಗಿರುವ ಮಂಗಳೂರಿನ ಜನತೆಯನ್ನು ಪ್ರಾರ್ಥಿಸಿಕೊಂಡಿದ್ದಾರೆ.</p>.<p><strong>ಭಾರತ– ಪಾಕ್ ರಾಜಿಗೆ ಕೊಸಿಗಿನ್ರ ಹೊಸ ಯತ್ನ?</strong></p>.<p><strong>ರಾವಲ್ಪಿಂಡಿ, ಏ. 20–</strong> ಪಾಕಿಸ್ತಾನಕ್ಕೆ ಅಧಿಕೃತ ಭೇಟಿ ಕೊಟ್ಟು ಸ್ವದೇಶಕ್ಕೆ ಹೋಗುವ ಮಾರ್ಗದಲ್ಲಿ ನವದೆಹಲಿಗೆ ಭೇಟಿ ಕೊಡಲಿರುವ ರಷ್ಯ ಪ್ರಧಾನಿ ಕೊಸಿಗಿನ್ ಅವರು ಭಾರತ– ಪಾಕಿಸ್ತಾನ ನಡುವಣ ಬಾಂಧವ್ಯದ ಬಗ್ಗೆ ಮತ್ತೆ ಮಧ್ಯಸ್ಥಿಕೆ ಪ್ರಯತ್ನ ನಡೆಸಬಹುದೆಂದು ಇಲ್ಲಿ ಊಹಾ<br /> ಪೋಹವೆದ್ದಿದೆ.</p>.<p><strong>ಖಡಕ್ವಾಸ್ಲಾ ವರದಿ ಮೈಸೂರಿಗೆ ಅನುಕೂಲ?</strong></p>.<p><strong>ಬೆಂಗಳೂರು, ಏ. 20–</strong> ಇದೀಗ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿರುವ ಕೃಷ್ಣಾ ಜಲಪ್ರಮಾಣ ನಿರ್ಧಾರದ ಸಂಬಂಧದ ಖಡಕ್ ವಾಸ್ಲಾ ಜಲ ಸಂಶೋಧನಾ ಕೇಂದ್ರ ವರದಿಯು ಮೈಸೂರಿನ ನಿಲುವಿಗೆ ಅನುಕೂಲವಾಗಿದೆ ಎಂದು ಅಧಿಕೃತ ವಲಯಗಳು ಅಭಿಪ್ರಾಯಪಟ್ಟಿವೆ.</p>.<p><strong>ರೈತರ ತೊಂದರೆ ತಪ್ಪಿಸುವ ಹೊಸ ರಶೀತಿ ಪಟ್ಟೆ</strong></p>.<p><strong>ಬೆಂಗಳೂರು, ಏ. 20–</strong> ರೈತರ ಜಮೀನು ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಹಾಯ ಮಾಡುವ ಹಾಗೂ ಅಲೆದಾಟ ಹಾಗೂ ತೊಂದರೆಗಳನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಸಿದ್ಧಗೊಳಿಸಿರುವ ಹೊಸ ರಶೀತಿ ಪಟ್ಟಿಗಳು (ಪಟ್ಟೆ) ಮೇ ಅಂತ್ಯದ ಹೊತ್ತಿಗೆ ಸಿದ್ಧವಾಗಲಿವೆ ಎಂದು ನಿರೀಕ್ಷಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರಿನಲ್ಲಿ ಅನೇಕ ಬಾರಿ ಗೋಲಿಬಾರ್</strong></p>.<p><strong>ಮಂಗಳೂರು, ಏ. 20–</strong> ಮಂಗಳೂರು ಬಂದರು ಪ್ರದೇಶದಲ್ಲಿ ಇಂದು ಲೂಟಿ, ಗಲಭೆ, ಬೆಂಕಿ ಹಚ್ಚುವ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದ ಉದ್ರಿಕ್ತ ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮುಂತಾದ ಯತ್ನಗಳಲ್ಲಿ ವಿಫಲರಾದ ಪೋಲೀಸರಿಂದ ಅನೇಕ ಸುತ್ತು ಗೋಲಿಬಾರ್, ಒಬ್ಬರು ಬಲಿ, 40 ಮಂದಿಗೆ ಗಾಯ.</p>.<p>ನಿನ್ನೆ ಎರಡು ವಿರುದ್ಧ ಗುಂಪುಗಳ ನಡುವೆ ಸಂಭವಿಸಿದ ಘರ್ಷಣೆಯ ಪರಿಣಾಮವಾಗಿ ಉದ್ಭವಿಸಿದ ಉಗ್ರ ಪರಿಸ್ಥಿತಿಯನ್ನು ಹತೋಟಿಗೆ ತರಲು ನಿನ್ನೆ ರಾತ್ರಿ ಸಹ ಪೋಲೀಸರಿಂದ ಎರಡು ಕಡೆ ಗೋಲಿಬಾರ್, ಆದರೂ ಇಂದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಶಾಂತಿ ಸಮಿತಿ ಸಭೆ ಸಮಾವೇಶಗೊಂಡ ನಂತರ ಈ ದಿನ ಸಂಜೆ 7 ಗಂಟೆಯಿಂದ ನಾಳೆ ಬೆಳಿಗ್ಗೆ 7 ಗಂಟೆಯವರೆಗೆ (12 ಗಂಟೆಗಳ ಕಾಲ) ಕರ್ಫ್ಯೂ ಜಾರಿಗೆ ತರಲಾಯಿತು.</p>.<p><strong>ಟ್ರೈನ್ಗೆ ತಡೆ</strong></p>.<p><strong>ಕೋಟೇಕರ್, ಏ. 20–</strong> ಮಂಗಳೂರು ಗಲಭೆಗಳ ಕಾರಣದಿಂದ ‘ನಾನ್ಸ್ಟಾಪ್’ ಎಕ್ಸ್ಪ್ರೆಸ್ ಟ್ರೈನ್ಗಳನ್ನು ಉಲ್ಲಾಳದಲ್ಲಿ ತಡೆದು ನಿಲ್ಲಿಸಲಾಗಿದೆ. ಗಲಭೆಗಳಲ್ಲಿ ಒಂದು ಪಕ್ಷದ ಬೆಂಬಲಿಗರೆಂದು ಹೇಳಲಾಗಿರುವ ಮಲಬಾರ್ನಿಂದ ಬರುತ್ತಿದ್ದ ಒಂಬತ್ತು ಜನರನ್ನು ತಲಪಾಡಿಯಲ್ಲಿ ಬಂಧಿಸಲಾಗಿದೆ. ಮಲಬಾರ್ನಿಂದ ಬರುತ್ತಿರುವ ಎಲ್ಲ ಬಸ್ ಮತ್ತು ಕಾರ್ಗಳನ್ನು ಶೋಧಿಸಲಾಗುತ್ತಿದೆ.</p>.<p><strong>ಹಿಂಸೆ ನಿಲ್ಲಿಸಿ ಶಾಂತಿ ಸ್ಥಾಪಿಸಿ: ಎಸ್ಸೆನ್</strong></p>.<p><strong>ಬೆಂಗಳೂರು, ಏ. 20–</strong> ‘ಹಿಂಸೆಯನ್ನು ನಿಲ್ಲಿಸಿ, ಶಾಂತಿಯನ್ನು ಸ್ಥಾಪಿಸಿ, ಕಾನೂನನ್ನು ಗೌರವಿಸಿ’ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ಮತೀಯ ಗಲಭೆಯಿಂದ ಬಾಧಿತವಾಗಿರುವ ಮಂಗಳೂರಿನ ಜನತೆಯನ್ನು ಪ್ರಾರ್ಥಿಸಿಕೊಂಡಿದ್ದಾರೆ.</p>.<p><strong>ಭಾರತ– ಪಾಕ್ ರಾಜಿಗೆ ಕೊಸಿಗಿನ್ರ ಹೊಸ ಯತ್ನ?</strong></p>.<p><strong>ರಾವಲ್ಪಿಂಡಿ, ಏ. 20–</strong> ಪಾಕಿಸ್ತಾನಕ್ಕೆ ಅಧಿಕೃತ ಭೇಟಿ ಕೊಟ್ಟು ಸ್ವದೇಶಕ್ಕೆ ಹೋಗುವ ಮಾರ್ಗದಲ್ಲಿ ನವದೆಹಲಿಗೆ ಭೇಟಿ ಕೊಡಲಿರುವ ರಷ್ಯ ಪ್ರಧಾನಿ ಕೊಸಿಗಿನ್ ಅವರು ಭಾರತ– ಪಾಕಿಸ್ತಾನ ನಡುವಣ ಬಾಂಧವ್ಯದ ಬಗ್ಗೆ ಮತ್ತೆ ಮಧ್ಯಸ್ಥಿಕೆ ಪ್ರಯತ್ನ ನಡೆಸಬಹುದೆಂದು ಇಲ್ಲಿ ಊಹಾ<br /> ಪೋಹವೆದ್ದಿದೆ.</p>.<p><strong>ಖಡಕ್ವಾಸ್ಲಾ ವರದಿ ಮೈಸೂರಿಗೆ ಅನುಕೂಲ?</strong></p>.<p><strong>ಬೆಂಗಳೂರು, ಏ. 20–</strong> ಇದೀಗ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿರುವ ಕೃಷ್ಣಾ ಜಲಪ್ರಮಾಣ ನಿರ್ಧಾರದ ಸಂಬಂಧದ ಖಡಕ್ ವಾಸ್ಲಾ ಜಲ ಸಂಶೋಧನಾ ಕೇಂದ್ರ ವರದಿಯು ಮೈಸೂರಿನ ನಿಲುವಿಗೆ ಅನುಕೂಲವಾಗಿದೆ ಎಂದು ಅಧಿಕೃತ ವಲಯಗಳು ಅಭಿಪ್ರಾಯಪಟ್ಟಿವೆ.</p>.<p><strong>ರೈತರ ತೊಂದರೆ ತಪ್ಪಿಸುವ ಹೊಸ ರಶೀತಿ ಪಟ್ಟೆ</strong></p>.<p><strong>ಬೆಂಗಳೂರು, ಏ. 20–</strong> ರೈತರ ಜಮೀನು ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಹಾಯ ಮಾಡುವ ಹಾಗೂ ಅಲೆದಾಟ ಹಾಗೂ ತೊಂದರೆಗಳನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಸಿದ್ಧಗೊಳಿಸಿರುವ ಹೊಸ ರಶೀತಿ ಪಟ್ಟಿಗಳು (ಪಟ್ಟೆ) ಮೇ ಅಂತ್ಯದ ಹೊತ್ತಿಗೆ ಸಿದ್ಧವಾಗಲಿವೆ ಎಂದು ನಿರೀಕ್ಷಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>