ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಕಾಂಗ್ರೆಸ್ ಸರ್ಕಾರ ಸದಾ ನಿದ್ದೆ ಮಾಡುವ ಸರ್ಕಾರ: ಮೋದಿ

Last Updated 6 ಮೇ 2018, 13:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಈ ಕಾಂಗ್ರೆಸ್ ಸರ್ಕಾರ ಸದಾ ನಿದ್ದೆ ಮಾಡುವ ಸರ್ಕಾರ. ಇಂಥ ಸರ್ಕಾರದ ಕಾರಣದಿಂದಲೇ ಹುಬ್ಬಳ್ಳಿ-ಅಂಕೋಲ ರೈಲು ಯೋಜನೆ ಕುಂಟುತ್ತಿದೆ ಎಂದು ಆರೋಪಿಸಿದರು. 

ಹುಬ್ಬಳ್ಳಿ-ಅಂಕೋಲ ರೈಲು ಯೋಜನೆ ರಾಜ್ಯ ಸರ್ಕಾರ ಮರೆತು ಹೋಗಿದೆ. ನಿಮಗಾದರೂ ನೆನಪಿದೆಯೇ? ಈ ಯೋಜನೆಯನ್ನು ಅಟಲ್‌ ಜಿ ಯೋಚಿಸಿದ್ದರು. ಬಜೆಟ್ ವ್ಯವಸ್ಥೆ ಮಾಡಿದ್ದರು. 

ಈ ಸರ್ಕಾರಕ್ಕೆ ಇಂದಿನ ಚಿಂತೆ ಇಲ್ಲ, ಮುಂದಿನ ಚಿಂತೆ ಇಲ್ಲ. ಅವರಿಗೆ ಅವರ ಕುರ್ಚಿ ಉಳಿಸಿಕೊಳ್ಳುವ ಚಿಂತೆ. ಕಾಂಗ್ರೆಸ್‌ನ ನೇತಾರರು ಬಿಜೆಪಿಗೆ ಪ್ರಶ್ನೆಗಳನ್ನು ಹಾಕುತ್ತಾರೆ.

ಸೋನಿಯಾ ನೇತೃತ್ವದ ಯುಪಿಎ ಸರ್ಕಾರ ಅಡಿಕೆಯು ದೇಹಕ್ಕೆ ಹಾನಿಕಾರಕ ಅಂತ ಸುಪ್ರಿಂ ಕೋರ್ಟ್‌ಗೆ ಅಫಿಡಿವಿಟ್ ಹಾಕಿದ್ದರು. ರೈತರು ಸಿಟ್ಟಾಗಿ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು. ಸೋನಿಯಾ ಸರ್ಕಾರ ಯು ಟರ್ನ್ ಮಾಡಬೇಕಾಗಿ ಬಂತು. ಅದು ರೈತರ ಶಕ್ತಿ ಎಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT