<p><strong>ಮಂಗಳೂರು: </strong>ಕರ್ಣಾಟಕ ಬ್ಯಾಂಕ್ನ ವಾರ್ಷಿಕ ನಿವ್ವಳ ಲಾಭ ₹ 325.61 ಕೋಟಿಗೆ ತಲುಪಿದೆ. ಮಾರ್ಚ್ಗೆ ಕೊನೆಗೊಂಡ ವರ್ಷಕ್ಕೆ ಪ್ರತಿ ಷೇರಿಗೆ ₹3ರಂತೆ ಲಾಭಾಂಶ ನೀಡಲು ಬ್ಯಾಂಕ್ನ ನಿರ್ದೇಶಕ ಮಂಡಳಿ ಶಿಫಾರಸು ಮಾಡಿದೆ.</p>.<p>ಈ ವರ್ಷ ಮಾರ್ಚ್ 31ಕ್ಕೆ ಬ್ಯಾಂಕ್ನ ಒಟ್ಟು ವ್ಯವಹಾರವು ₹1,10,123 ಕೋಟಿಗೆ ತಲುಪಿದ್ದು, ಇದು ವಾರ್ಷಿಕ ಶೇ 17.59 ರಷ್ಟು ಬೆಳವಣಿಗೆಯಾಗಿದೆ. ಕಳೆದ ವರ್ಷಾಂತ್ಯಕ್ಕೆ ₹56,733 ಕೋಟಿಗಳಷ್ಟು ಇದ್ದ ಠೇವಣಿಯು ಶೇ 10.82 ರಷ್ಟು ಏರಿಕೆಯಾಗಿದ್ದು, ಪ್ರಸಕ್ತ ವರ್ಷಾಂತ್ಯದಲ್ಲಿ ₹62,871 ಕೋಟಿ ತಲುಪಿದೆ. ಸಾಲ ವಿತರಣೆಯು ಕಳೆದ ವರ್ಷದ ₹36,916 ಕೋಟಿಯಿಂದ ₹47,252 ಕೋಟಿ ತಲುಪಿದೆ. ಸಾಲ ವಿತರಣೆಯಲ್ಲಿ ಶೇ 28 ರಷ್ಟು ಪ್ರಗತಿಯಾಗಿದೆ.</p>.<p>‘ನಾಲ್ಕನೇ ತ್ರೈಮಾಸಿಕದಲ್ಲಿನ ನಿವ್ವಳ ಲಾಭವು ₹ 11 ಕೋಟಿಗಳಷ್ಟಾಗಿದೆ. ವರ್ಷದ ಹಿಂದಿನ ಲಾಭವು ₹ 138 ಕೋಟಿಗಳಷ್ಟಿತ್ತು. ವಸೂಲಾಗದ ಸಾಲಗಳಿಗಾಗಿ ಹೆಚ್ಚಿನ ಮೊತ್ತ ತೆಗೆದು ಇರಿಸಿದ್ದರಿಂದ ನಿವ್ವಳ ಲಾಭ ಕಡಿಮೆಯಾಗಿದೆ’ ಎಂದು ಸಿಇಒ ಮಹಾಬಲೇಶ್ವರ ಎಂ.ಎಸ್. ಹೇಳಿದ್ದಾರೆ.</p>.<p>‘ಬ್ಯಾಂಕಿಂಗ್ ವಲಯದ ಪ್ರತಿಕೂಲ ವಾತಾವರಣದ ಮಧ್ಯೆಯೂ ಒಟ್ಟು ವಸೂಲಾಗದ ಸಾಲ (ಜಿಎನ್ಪಿಎ) ಶೇ 4.92 ಕ್ಕೆ ಹಾಗೂ ನಿವ್ವಳ ವಸೂಲಾಗದ ಸಾಲದ ಪ್ರಮಾಣ (ಎನ್ಎನ್ಪಿಎ) ಶೇ 2.96 ಕ್ಕೆ ನಿಯಂತ್ರಿಸಿರುವುದು ಸಮಾಧಾನಕರ ಬೆಳವಣಿಗೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ಕರ್ಣಾಟಕ ಬ್ಯಾಂಕ್ನ ವಾರ್ಷಿಕ ನಿವ್ವಳ ಲಾಭ ₹ 325.61 ಕೋಟಿಗೆ ತಲುಪಿದೆ. ಮಾರ್ಚ್ಗೆ ಕೊನೆಗೊಂಡ ವರ್ಷಕ್ಕೆ ಪ್ರತಿ ಷೇರಿಗೆ ₹3ರಂತೆ ಲಾಭಾಂಶ ನೀಡಲು ಬ್ಯಾಂಕ್ನ ನಿರ್ದೇಶಕ ಮಂಡಳಿ ಶಿಫಾರಸು ಮಾಡಿದೆ.</p>.<p>ಈ ವರ್ಷ ಮಾರ್ಚ್ 31ಕ್ಕೆ ಬ್ಯಾಂಕ್ನ ಒಟ್ಟು ವ್ಯವಹಾರವು ₹1,10,123 ಕೋಟಿಗೆ ತಲುಪಿದ್ದು, ಇದು ವಾರ್ಷಿಕ ಶೇ 17.59 ರಷ್ಟು ಬೆಳವಣಿಗೆಯಾಗಿದೆ. ಕಳೆದ ವರ್ಷಾಂತ್ಯಕ್ಕೆ ₹56,733 ಕೋಟಿಗಳಷ್ಟು ಇದ್ದ ಠೇವಣಿಯು ಶೇ 10.82 ರಷ್ಟು ಏರಿಕೆಯಾಗಿದ್ದು, ಪ್ರಸಕ್ತ ವರ್ಷಾಂತ್ಯದಲ್ಲಿ ₹62,871 ಕೋಟಿ ತಲುಪಿದೆ. ಸಾಲ ವಿತರಣೆಯು ಕಳೆದ ವರ್ಷದ ₹36,916 ಕೋಟಿಯಿಂದ ₹47,252 ಕೋಟಿ ತಲುಪಿದೆ. ಸಾಲ ವಿತರಣೆಯಲ್ಲಿ ಶೇ 28 ರಷ್ಟು ಪ್ರಗತಿಯಾಗಿದೆ.</p>.<p>‘ನಾಲ್ಕನೇ ತ್ರೈಮಾಸಿಕದಲ್ಲಿನ ನಿವ್ವಳ ಲಾಭವು ₹ 11 ಕೋಟಿಗಳಷ್ಟಾಗಿದೆ. ವರ್ಷದ ಹಿಂದಿನ ಲಾಭವು ₹ 138 ಕೋಟಿಗಳಷ್ಟಿತ್ತು. ವಸೂಲಾಗದ ಸಾಲಗಳಿಗಾಗಿ ಹೆಚ್ಚಿನ ಮೊತ್ತ ತೆಗೆದು ಇರಿಸಿದ್ದರಿಂದ ನಿವ್ವಳ ಲಾಭ ಕಡಿಮೆಯಾಗಿದೆ’ ಎಂದು ಸಿಇಒ ಮಹಾಬಲೇಶ್ವರ ಎಂ.ಎಸ್. ಹೇಳಿದ್ದಾರೆ.</p>.<p>‘ಬ್ಯಾಂಕಿಂಗ್ ವಲಯದ ಪ್ರತಿಕೂಲ ವಾತಾವರಣದ ಮಧ್ಯೆಯೂ ಒಟ್ಟು ವಸೂಲಾಗದ ಸಾಲ (ಜಿಎನ್ಪಿಎ) ಶೇ 4.92 ಕ್ಕೆ ಹಾಗೂ ನಿವ್ವಳ ವಸೂಲಾಗದ ಸಾಲದ ಪ್ರಮಾಣ (ಎನ್ಎನ್ಪಿಎ) ಶೇ 2.96 ಕ್ಕೆ ನಿಯಂತ್ರಿಸಿರುವುದು ಸಮಾಧಾನಕರ ಬೆಳವಣಿಗೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>