<p><strong>ಬೆಂಗಳೂರು: </strong>ಕರ್ನಾಟಕದ ಪುರುಷರ ತಂಡದವರು ಚಂಡೀಗಡದಲ್ಲಿ ನಡೆದ 11ನೇ ಫೆಡರೇಷನ್ ಕಪ್ ಬೇಸ್ಬಾಲ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ.</p>.<p>ಪಂಜಾಬ್ ವಿಶ್ವವಿದ್ಯಾಲಯದ ಅಂಗಳದಲ್ಲಿ ಜರುಗಿದ ಫೈನಲ್ನಲ್ಲಿ ಕರ್ನಾಟಕ ತಂಡ 3–5ರಲ್ಲಿ ಪಂಜಾಬ್ ತಂಡದ ವಿರುದ್ಧ ಸೋತಿತು.</p>.<p>ವಿಜಯಿ ತಂಡದ ರವಿ, ಅಮಿತ್, ಅನಿಲ್, ಅಜಯ್ ಮತ್ತು ವೀರೇಂದರ್ಜಿತ್ ಅವರು ತಲಾ ಒಂದು ರನ್ ಗಳಿಸಿದರು. ಕರ್ನಾಟಕದ ಭರತ್, ಯಶಸ್ ಮತ್ತು ಕಾರ್ತಿಕ್ ತಲಾ ಒಂದು ರನ್ ದಾಖಲಿಸಿ ಸೋಲಿನ ನಡುವೆಯೂ ಗಮನ ಸೆಳೆದರು.</p>.<p>ಮೊದಲ ಹಣಾಹಣಿಯಲ್ಲಿ 10–0ರಲ್ಲಿ ಹರಿಯಾಣ ತಂಡವನ್ನು ಮಣಿಸಿದ್ದ ಕರ್ನಾಟಕ ತಂಡ ನಂತರದ ಪಂದ್ಯದಲ್ಲಿ 6–9ರಿಂದ ಚಂಡೀಗಡ ವಿರುದ್ಧ ಸೋತಿತ್ತು. ಆದರೆ ಮೂರನೇ ಪಂದ್ಯದಲ್ಲಿ 10–2ರಿಂದ ಗುಜರಾತ್ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿತ್ತು.</p>.<p>ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಎ.ಆದಿತ್ಯ ಪಡೆ 7–3ರಲ್ಲಿ ದೆಹಲಿ ತಂಡವನ್ನು ಪರಾಭವಗೊಳಿಸಿತ್ತು. ಈ ಪಂದ್ಯದಲ್ಲಿ ಆದಿತ್ಯ, ಎ.ವಿನಯ್ ಕುಮಾರ್, ಬಿ.ಎಂ.ಫೈಜನ್ ಖಾನ್ ಮತ್ತು ಭರತ್ ಮಿಂಚಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕರ್ನಾಟಕದ ಪುರುಷರ ತಂಡದವರು ಚಂಡೀಗಡದಲ್ಲಿ ನಡೆದ 11ನೇ ಫೆಡರೇಷನ್ ಕಪ್ ಬೇಸ್ಬಾಲ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ.</p>.<p>ಪಂಜಾಬ್ ವಿಶ್ವವಿದ್ಯಾಲಯದ ಅಂಗಳದಲ್ಲಿ ಜರುಗಿದ ಫೈನಲ್ನಲ್ಲಿ ಕರ್ನಾಟಕ ತಂಡ 3–5ರಲ್ಲಿ ಪಂಜಾಬ್ ತಂಡದ ವಿರುದ್ಧ ಸೋತಿತು.</p>.<p>ವಿಜಯಿ ತಂಡದ ರವಿ, ಅಮಿತ್, ಅನಿಲ್, ಅಜಯ್ ಮತ್ತು ವೀರೇಂದರ್ಜಿತ್ ಅವರು ತಲಾ ಒಂದು ರನ್ ಗಳಿಸಿದರು. ಕರ್ನಾಟಕದ ಭರತ್, ಯಶಸ್ ಮತ್ತು ಕಾರ್ತಿಕ್ ತಲಾ ಒಂದು ರನ್ ದಾಖಲಿಸಿ ಸೋಲಿನ ನಡುವೆಯೂ ಗಮನ ಸೆಳೆದರು.</p>.<p>ಮೊದಲ ಹಣಾಹಣಿಯಲ್ಲಿ 10–0ರಲ್ಲಿ ಹರಿಯಾಣ ತಂಡವನ್ನು ಮಣಿಸಿದ್ದ ಕರ್ನಾಟಕ ತಂಡ ನಂತರದ ಪಂದ್ಯದಲ್ಲಿ 6–9ರಿಂದ ಚಂಡೀಗಡ ವಿರುದ್ಧ ಸೋತಿತ್ತು. ಆದರೆ ಮೂರನೇ ಪಂದ್ಯದಲ್ಲಿ 10–2ರಿಂದ ಗುಜರಾತ್ ವಿರುದ್ಧ ಗೆದ್ದು ಸೆಮಿಫೈನಲ್ ಪ್ರವೇಶಿಸಿತ್ತು.</p>.<p>ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಎ.ಆದಿತ್ಯ ಪಡೆ 7–3ರಲ್ಲಿ ದೆಹಲಿ ತಂಡವನ್ನು ಪರಾಭವಗೊಳಿಸಿತ್ತು. ಈ ಪಂದ್ಯದಲ್ಲಿ ಆದಿತ್ಯ, ಎ.ವಿನಯ್ ಕುಮಾರ್, ಬಿ.ಎಂ.ಫೈಜನ್ ಖಾನ್ ಮತ್ತು ಭರತ್ ಮಿಂಚಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>