ಇನ್ನೇನು ಕಥೆಯ ಅಂತ್ಯ ಎಲ್ಲೆಡೆಯೂ ನಿರಾಶಾದಾಯಕವಾಗಬಹುದು ಎನಿಸುವಾಗಲೇ ಸುಖಾಂತ್ಯವನ್ನು ಕಾಣಿಸುವುದು ಇಡೀ ಓದು, ಹತಾಶೆಗೆ ತಳ್ಳದಂತೆ ಮಾಡುತ್ತದೆ. ಮಾನವ ಸಂಬಂಧಗಳು, ನಿರ್ಲಕ್ಷ್ಯ, ನಿರ್ಲಜ್ಜ, ಆಸೆ, ವಾಂಛೆ, ಉಡಾಫೆತನ, ಔದಾರ್ಯ ಎಲ್ಲವನ್ನೂ ಒಂದೊಂದು ಪಾತ್ರಗಳಾಗಿಯೇ ಮುಂಚೂಣಿಗೆ ತರುವ ಲೇಖಕರ ತಂತ್ರ ಇಲ್ಲಿ ಫಲಿಸಿದೆ. ಮೊದಲ ಪ್ರಯತ್ನದಲ್ಲಿಯೇ ನಾಲ್ಕು ಮೂಲೆಗಳನ್ನು ಒಂದು ಚೌಕಕ್ಕೆ ತಂದಿರುವ ಈ ಸಾಹಸ ಮೆಚ್ಚುವಂಥದ್ದು.