<p><strong>ವೀರೇಂದ್ರ ಪಾಟೀಲ್ ರಾಜ್ಯದ ನೂತನ ಮುಖ್ಯಮಂತ್ರಿ</strong></p>.<p><strong>ಬೆಂಗಳೂರು, ಮೇ 23–</strong> ನಲವತ್ತೈದು ವರ್ಷ ವಯಸ್ಸಿನ ಲೋಕೋಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರು ಮೈಸೂರು ರಾಜ್ಯದ ನೂತನ ಮುಖ್ಯಮಂತ್ರಿ.</p>.<p>ಇಂದು ಬೆಳಿಗ್ಗೆ ಸೇರಿದ್ದ ವಿಧಾನಮಂಡಲದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ನಡೆದ ಸದಸ್ಯರ ಅಭಿಪ್ರಾಯ ಸಂಗ್ರಹದಲ್ಲಿ ‘ಭಾರಿ ಬಹುಮತ’ವನ್ನು ಗಳಿಸಿದ ಶ್ರೀ ಪಾಟೀಲ್ ಅವರನ್ನು ಪಕ್ಷ ಸರ್ವಾನುಮತದಿಂದ ತನ್ನ ನಾಯಕನನ್ನಾಗಿ ಆರಿಸಿತು.</p>.<p>ನಾಯಕ ಸ್ಥಾನಕ್ಕೆ ಮತ್ತೊಬ್ಬ ಸ್ಪರ್ಧಿಯಾಗಿದ್ದ ಸಚಿವ ಬಿ.ಡಿ. ಜತ್ತಿ ಅವರು ಶ್ರೀ ವೀರೇಂದ್ರ ಪಾಟೀಲ್ ಅವರ ಹೆಸರನ್ನು ಸೂಚಿಸಿದರು.</p>.<p><strong>**</strong></p>.<p><strong>ವೀರೇಂದ್ರರ ಪರ 133, ಜತ್ತಿ ಅವರಿಗೆ 41 ಮತ</strong></p>.<p><strong>ಬೆಂಗಳೂರು, ಮೇ 23–</strong> ಇಂದು ವಿಧಾನ ಮಂಡಲದ ಕಾಂಗ್ರೆಸ್ ಪಕ್ಷದಲ್ಲಿ ಅನೌಪಚಾರಿಕವಾಗಿ ನಡೆದ ಸದಸ್ಯರ ಅಭಿಪ್ರಾಯ ಸಂಗ್ರಹಣೆಯಲ್ಲಿ 133 ಮಂದಿ ಸದಸ್ಯರು ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರಿಗೂ 41 ಮಂದಿ ಸಚಿವ ಶ್ರೀ ಜತ್ತಿ ಅವರಿಗೂ ಬೆಂಬಲ ನೀಡಿದರೆಂದು ತಿಳಿದುಬಂದಿದೆ.</p>.<p><strong>**</strong></p>.<p><strong>ಇಳಿದ ಭಾರ</strong></p>.<p><strong>ಬೆಂಗಳೂರು, ಮೇ 23–</strong> ಪರೀಕ್ಷೆ ಮುಗಿದ ದಿನ ವಿದ್ಯಾರ್ಥಿಯ ಮನಸ್ಸು ಎಷ್ಟು ಹಗುರ.</p>.<p>ಇಂದು ಕಾಂಗ್ರೆಸ್ ಪಕ್ಷದ ನಾಯಕತ್ವದ ಹೊಣೆಯಿಂದ ದೂರವಾದ ಶ್ರೀ ನಿಜಲಿಂಗಪ್ಪ ಅವರ ಮನಸ್ಸು ಹಗುರವಾಗಿತ್ತು. ‘ಒಂದು ಭಾರ ಕಳೆಯಿತು’ ಎಂದರು.</p>.<p>ಸಂಜೆ ನಗರದ ಪತ್ರಿಕಾ ವರದಿಗಾರರು ಏರ್ಪಡಿಸಿದ್ದ ಸತ್ಕಾರ ಕೂಟದಲ್ಲಿ ಮುಖ್ಯಮಂತ್ರಿಗಳು ಪರೀಕ್ಷೆಯ ಕಡೆಯ ದಿನದ ಆನಂದವನ್ನು ನೆನೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೀರೇಂದ್ರ ಪಾಟೀಲ್ ರಾಜ್ಯದ ನೂತನ ಮುಖ್ಯಮಂತ್ರಿ</strong></p>.<p><strong>ಬೆಂಗಳೂರು, ಮೇ 23–</strong> ನಲವತ್ತೈದು ವರ್ಷ ವಯಸ್ಸಿನ ಲೋಕೋಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರು ಮೈಸೂರು ರಾಜ್ಯದ ನೂತನ ಮುಖ್ಯಮಂತ್ರಿ.</p>.<p>ಇಂದು ಬೆಳಿಗ್ಗೆ ಸೇರಿದ್ದ ವಿಧಾನಮಂಡಲದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ನಡೆದ ಸದಸ್ಯರ ಅಭಿಪ್ರಾಯ ಸಂಗ್ರಹದಲ್ಲಿ ‘ಭಾರಿ ಬಹುಮತ’ವನ್ನು ಗಳಿಸಿದ ಶ್ರೀ ಪಾಟೀಲ್ ಅವರನ್ನು ಪಕ್ಷ ಸರ್ವಾನುಮತದಿಂದ ತನ್ನ ನಾಯಕನನ್ನಾಗಿ ಆರಿಸಿತು.</p>.<p>ನಾಯಕ ಸ್ಥಾನಕ್ಕೆ ಮತ್ತೊಬ್ಬ ಸ್ಪರ್ಧಿಯಾಗಿದ್ದ ಸಚಿವ ಬಿ.ಡಿ. ಜತ್ತಿ ಅವರು ಶ್ರೀ ವೀರೇಂದ್ರ ಪಾಟೀಲ್ ಅವರ ಹೆಸರನ್ನು ಸೂಚಿಸಿದರು.</p>.<p><strong>**</strong></p>.<p><strong>ವೀರೇಂದ್ರರ ಪರ 133, ಜತ್ತಿ ಅವರಿಗೆ 41 ಮತ</strong></p>.<p><strong>ಬೆಂಗಳೂರು, ಮೇ 23–</strong> ಇಂದು ವಿಧಾನ ಮಂಡಲದ ಕಾಂಗ್ರೆಸ್ ಪಕ್ಷದಲ್ಲಿ ಅನೌಪಚಾರಿಕವಾಗಿ ನಡೆದ ಸದಸ್ಯರ ಅಭಿಪ್ರಾಯ ಸಂಗ್ರಹಣೆಯಲ್ಲಿ 133 ಮಂದಿ ಸದಸ್ಯರು ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರಿಗೂ 41 ಮಂದಿ ಸಚಿವ ಶ್ರೀ ಜತ್ತಿ ಅವರಿಗೂ ಬೆಂಬಲ ನೀಡಿದರೆಂದು ತಿಳಿದುಬಂದಿದೆ.</p>.<p><strong>**</strong></p>.<p><strong>ಇಳಿದ ಭಾರ</strong></p>.<p><strong>ಬೆಂಗಳೂರು, ಮೇ 23–</strong> ಪರೀಕ್ಷೆ ಮುಗಿದ ದಿನ ವಿದ್ಯಾರ್ಥಿಯ ಮನಸ್ಸು ಎಷ್ಟು ಹಗುರ.</p>.<p>ಇಂದು ಕಾಂಗ್ರೆಸ್ ಪಕ್ಷದ ನಾಯಕತ್ವದ ಹೊಣೆಯಿಂದ ದೂರವಾದ ಶ್ರೀ ನಿಜಲಿಂಗಪ್ಪ ಅವರ ಮನಸ್ಸು ಹಗುರವಾಗಿತ್ತು. ‘ಒಂದು ಭಾರ ಕಳೆಯಿತು’ ಎಂದರು.</p>.<p>ಸಂಜೆ ನಗರದ ಪತ್ರಿಕಾ ವರದಿಗಾರರು ಏರ್ಪಡಿಸಿದ್ದ ಸತ್ಕಾರ ಕೂಟದಲ್ಲಿ ಮುಖ್ಯಮಂತ್ರಿಗಳು ಪರೀಕ್ಷೆಯ ಕಡೆಯ ದಿನದ ಆನಂದವನ್ನು ನೆನೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>