<p><strong>ಏ.ಐ.ಸಿ.ಸಿ. ಅಧಿವೇಶನ: ನಾಯಕತ್ವದ ನಿರಾತಂಕ ಧೋರಣೆಗೆ ಉಗ್ರ ಟೀಕೆ</strong><br /> ನವದೆಹಲಿ, ಜೂನ್ 3– ಇತ್ತೀಚಿನ ಚುನಾವಣಾ ವಿಜಯದಿಂದ ಉಂಟಾದ ಸಂತೃಪ್ತ ಮನೋಭಾವವನ್ನು ಕಾಂಗ್ರೆಸ್ ಪಕ್ಷ ಬಿಡಬೇಕಾದ್ದು ಅಗತ್ಯ.</p>.<p>ಏ.ಐ.ಸಿ.ಸಿ. ಅಧಿವೇಶನದ ಎರಡನೇ ದಿನವಾದ ಇಂದು ರಾಷ್ಟ್ರದ ರಾಜಕೀಯ ಪರಿಸ್ಥಿತಿ ಕುರಿತ ಶ್ರೀ ಎಸ್.ಎನ್. ಮಿಶ್ರ ಅವರ ನಿರ್ಣಯದ ಮೇಲೆ ಎಂಟು ಗಂಟೆ ನಡೆದ ಚರ್ಚೆಯಲ್ಲಿ ಈ ಅಗತ್ಯವನ್ನು ಎಲ್ಲರೂ ಒತ್ತಿ ಹೇಳಿದರು.</p>.<p><strong>ಯೋಜನಾ ಚಿತ್ರ </strong><br /> ನವದೆಹಲಿ, ಜೂ. 3– ಪ್ರಖ್ಯಾತ ಅರ್ಥ ಶಾಸ್ತ್ರಜ್ಞ ಹಾಗೂ ಕೇಂದ್ರ ಸಾರಿಗೆ ಸಚಿವ ಡಾ. ವಿ.ಕೆ.ಆರ್.ವಿ. ರಾವ್ ಅವರು ಇಂದು ಏ.ಐ.ಸಿ.ಸಿ. ಅಧಿವೇಶನದಲ್ಲಿ ಮಾತನಾಡುತ್ತಾ ಭಾರತದ ಯೋಜನಾ ಪ್ರಗತಿಯ ಚಿತ್ರವನ್ನು ಕೊಟ್ಟರು.</p>.<p>‘ಮೊದಲನೆಯ ಯೋಜನೆ ಯಶಸ್ವಿಯಾಯಿತು. ಎರಡನೆ ಯೋಜನೆ ಸಾಧಾರಣ ಯಶಸ್ಸು ಪಡೆಯಿತು. ಮೂರನೆಯ ಯೋಜನೆ ವಿಫಲವಾಯಿತು. ಕಳೆದ ಮೂರು ವರ್ಷಗಳು ಈ ಯೋಜನೆಗೆ ಪೂರ್ಣ ರಜೆ’</p>.<p>ನಾಲ್ಕನೆ ಯೋಜನೆ ಸಮೀಪಿಸುತ್ತಿರುವಂತೆ, 1975ರ ಹೊತ್ತಿಗೆ ಜನತೆಗೆ ಕನಿಷ್ಠ ಜೀವನ ಮಟ್ಟವನ್ನು ಒದಗಿಸುವ ಗುರಿಯನ್ನು ತಲುಪುವುದೂ ಅಸಾಧ್ಯವಾಗುತ್ತಿದೆ ಎಂದರು.</p>.<p><strong>ಜತ್ತಿ ಬಗ್ಗೆ ಕನಿಕರ</strong><br /> ನವದೆಹಲಿ, ಜೂನ್ 3– ಮೈಸೂರಿನ ಹೊಸ ಸಂಪುಟದಿಂದ ಕಳಚಿಬಿದ್ದ ಮಾಜಿ ಸಚಿವ ಬಿ.ಡಿ. ಜತ್ತಿ ಅವರ ಬಗ್ಗೆ ಇಂದು ಮಾವಳಂಕರ್ ಭವನದಲ್ಲಿ ಸಹಾನುಭೂತಿ ಮತ್ತು ಟೀಕೆಗಳೆರಡೂ ಒಟ್ಟೊಟ್ಟಿಗೆ ವ್ಯಕ್ತಪಟ್ಟವು.</p>.<p>ಹೊಸ ಸಂಪುಟದಲ್ಲೇಕೆ ನಿಮಗೆ ಸ್ಥಾನ ಸಿಗಲಿಲ್ಲವೆಂದು ಗೃಹಸಚಿವ ಚವಾಣರು ಶ್ರೀ ಜತ್ತಿಯವರನ್ನೇ ಕೇಳಿದರೆಂದು ನಂಬಲಾಗಿದೆ. ಅವರು (ಜತ್ತಿ) ದೆಹಲಿಗೆ ಬರುವುದು ಏನಾಯಿತೆಂದೂ ಚವಾಣ್ ಕೇಳಿದರೆನ್ನಲಾಗಿದೆ.</p>.<p><strong>ಸಚಿವಾಲಯ</strong><br /> ಬೆಂಗಳೂರು, ಜೂ. 3– ವಿಧಾನಸೌಧದ ಕೊನೆಯ ಅಂತಸ್ತು ಮೈಸೂರಿನ ‘ಸಚಿವಾಲಯ’ ಆಗಲಿದೆ.</p>.<p>ಮಹಾರಾಷ್ಟ್ರ ಸಚಿವಾಲಯದ ಮಾದರಿಯಲ್ಲಿ ರಾಜ್ಯದ ನೂತನ ಸಂಪುಟದ ಎಲ್ಲ ಸಚಿವರು, ಸ್ಟೇಟ್ ಸಚಿವರು ಹಾಗೂ ಉಪ ಸಚಿವರುಗಳಿಗೆ ವಿಧಾನಸೌಧದ ಮೂರನೆಯ ಅಂತಸ್ತಿನಲ್ಲಿ ಕೊಠಡಿಗಳ ವ್ಯವಸ್ಥೆಯಾಗಲಿದೆ.</p>.<p><strong>ಹೆಲನ್ ಕೆಲರ್ ನಿಧನಕ್ಕೆ ಸಂತಾಪ </strong><br /> ನವದೆಹಲಿ, ಜೂನ್ 3– ಶನಿವಾರ ರಾತ್ರಿ ಡಾ. ಹೆಲನ್ ಕಲರ್ ಅವರು ನಿಧನರಾದುದಕ್ಕೆ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಇಂದು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಏ.ಐ.ಸಿ.ಸಿ. ಅಧಿವೇಶನ: ನಾಯಕತ್ವದ ನಿರಾತಂಕ ಧೋರಣೆಗೆ ಉಗ್ರ ಟೀಕೆ</strong><br /> ನವದೆಹಲಿ, ಜೂನ್ 3– ಇತ್ತೀಚಿನ ಚುನಾವಣಾ ವಿಜಯದಿಂದ ಉಂಟಾದ ಸಂತೃಪ್ತ ಮನೋಭಾವವನ್ನು ಕಾಂಗ್ರೆಸ್ ಪಕ್ಷ ಬಿಡಬೇಕಾದ್ದು ಅಗತ್ಯ.</p>.<p>ಏ.ಐ.ಸಿ.ಸಿ. ಅಧಿವೇಶನದ ಎರಡನೇ ದಿನವಾದ ಇಂದು ರಾಷ್ಟ್ರದ ರಾಜಕೀಯ ಪರಿಸ್ಥಿತಿ ಕುರಿತ ಶ್ರೀ ಎಸ್.ಎನ್. ಮಿಶ್ರ ಅವರ ನಿರ್ಣಯದ ಮೇಲೆ ಎಂಟು ಗಂಟೆ ನಡೆದ ಚರ್ಚೆಯಲ್ಲಿ ಈ ಅಗತ್ಯವನ್ನು ಎಲ್ಲರೂ ಒತ್ತಿ ಹೇಳಿದರು.</p>.<p><strong>ಯೋಜನಾ ಚಿತ್ರ </strong><br /> ನವದೆಹಲಿ, ಜೂ. 3– ಪ್ರಖ್ಯಾತ ಅರ್ಥ ಶಾಸ್ತ್ರಜ್ಞ ಹಾಗೂ ಕೇಂದ್ರ ಸಾರಿಗೆ ಸಚಿವ ಡಾ. ವಿ.ಕೆ.ಆರ್.ವಿ. ರಾವ್ ಅವರು ಇಂದು ಏ.ಐ.ಸಿ.ಸಿ. ಅಧಿವೇಶನದಲ್ಲಿ ಮಾತನಾಡುತ್ತಾ ಭಾರತದ ಯೋಜನಾ ಪ್ರಗತಿಯ ಚಿತ್ರವನ್ನು ಕೊಟ್ಟರು.</p>.<p>‘ಮೊದಲನೆಯ ಯೋಜನೆ ಯಶಸ್ವಿಯಾಯಿತು. ಎರಡನೆ ಯೋಜನೆ ಸಾಧಾರಣ ಯಶಸ್ಸು ಪಡೆಯಿತು. ಮೂರನೆಯ ಯೋಜನೆ ವಿಫಲವಾಯಿತು. ಕಳೆದ ಮೂರು ವರ್ಷಗಳು ಈ ಯೋಜನೆಗೆ ಪೂರ್ಣ ರಜೆ’</p>.<p>ನಾಲ್ಕನೆ ಯೋಜನೆ ಸಮೀಪಿಸುತ್ತಿರುವಂತೆ, 1975ರ ಹೊತ್ತಿಗೆ ಜನತೆಗೆ ಕನಿಷ್ಠ ಜೀವನ ಮಟ್ಟವನ್ನು ಒದಗಿಸುವ ಗುರಿಯನ್ನು ತಲುಪುವುದೂ ಅಸಾಧ್ಯವಾಗುತ್ತಿದೆ ಎಂದರು.</p>.<p><strong>ಜತ್ತಿ ಬಗ್ಗೆ ಕನಿಕರ</strong><br /> ನವದೆಹಲಿ, ಜೂನ್ 3– ಮೈಸೂರಿನ ಹೊಸ ಸಂಪುಟದಿಂದ ಕಳಚಿಬಿದ್ದ ಮಾಜಿ ಸಚಿವ ಬಿ.ಡಿ. ಜತ್ತಿ ಅವರ ಬಗ್ಗೆ ಇಂದು ಮಾವಳಂಕರ್ ಭವನದಲ್ಲಿ ಸಹಾನುಭೂತಿ ಮತ್ತು ಟೀಕೆಗಳೆರಡೂ ಒಟ್ಟೊಟ್ಟಿಗೆ ವ್ಯಕ್ತಪಟ್ಟವು.</p>.<p>ಹೊಸ ಸಂಪುಟದಲ್ಲೇಕೆ ನಿಮಗೆ ಸ್ಥಾನ ಸಿಗಲಿಲ್ಲವೆಂದು ಗೃಹಸಚಿವ ಚವಾಣರು ಶ್ರೀ ಜತ್ತಿಯವರನ್ನೇ ಕೇಳಿದರೆಂದು ನಂಬಲಾಗಿದೆ. ಅವರು (ಜತ್ತಿ) ದೆಹಲಿಗೆ ಬರುವುದು ಏನಾಯಿತೆಂದೂ ಚವಾಣ್ ಕೇಳಿದರೆನ್ನಲಾಗಿದೆ.</p>.<p><strong>ಸಚಿವಾಲಯ</strong><br /> ಬೆಂಗಳೂರು, ಜೂ. 3– ವಿಧಾನಸೌಧದ ಕೊನೆಯ ಅಂತಸ್ತು ಮೈಸೂರಿನ ‘ಸಚಿವಾಲಯ’ ಆಗಲಿದೆ.</p>.<p>ಮಹಾರಾಷ್ಟ್ರ ಸಚಿವಾಲಯದ ಮಾದರಿಯಲ್ಲಿ ರಾಜ್ಯದ ನೂತನ ಸಂಪುಟದ ಎಲ್ಲ ಸಚಿವರು, ಸ್ಟೇಟ್ ಸಚಿವರು ಹಾಗೂ ಉಪ ಸಚಿವರುಗಳಿಗೆ ವಿಧಾನಸೌಧದ ಮೂರನೆಯ ಅಂತಸ್ತಿನಲ್ಲಿ ಕೊಠಡಿಗಳ ವ್ಯವಸ್ಥೆಯಾಗಲಿದೆ.</p>.<p><strong>ಹೆಲನ್ ಕೆಲರ್ ನಿಧನಕ್ಕೆ ಸಂತಾಪ </strong><br /> ನವದೆಹಲಿ, ಜೂನ್ 3– ಶನಿವಾರ ರಾತ್ರಿ ಡಾ. ಹೆಲನ್ ಕಲರ್ ಅವರು ನಿಧನರಾದುದಕ್ಕೆ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಇಂದು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>