ಚರಂಡಿಗಳನ್ನು ಭಾಗಶಃ ಮುಚ್ಚಲಾಗಿದೆ. ಚರಂಡಿಗಳಲ್ಲಿ ನೀರು ಹೋಗುವುದೇ ಇಲ್ಲ. ಪಾದಚಾರಿ ಮಾರ್ಗದಲ್ಲಿ ಅಳವಡಿಸಿದ 'ಪೇವರ್ಸ್' ಕುಸಿಯುತ್ತಿವೆ.ವಾಹನಗಳ ಪಾರ್ಕಿಂಗ್ಗೆ ಕಾಯ್ದಿಟ್ಟ ರಸ್ತೆಯಲ್ಲಿ ಮಳೆ ನೀರು ನಿಂತು ಅವಾಂತರ ಸೃಷ್ಟಿಸುತ್ತಿವೆ. ಇವುಗಳ ಮೇಲೆ ಅಲ್ಲಲ್ಲಿ ಜಲ್ಲಿಕಲ್ಲು, ಮರಳು, ಹಾಕಲಾಗಿದ್ದು 6 ತಿಂಗಳಿನಿಂದ ತೆಗೆದಿಲ್ಲ. ರಸ್ತೆ ವಿಭಜಕದಲ್ಲಿ ಕೆಲವೆಡೆ ಮಣ್ಣು ಹಾಕಿದ್ದರೂ ಸಸಿ ನೆಟ್ಟಿಲ್ಲ. ಇನ್ನು ಕೆಲವು ಕಡೆ ಮಣ್ಣು ತುಂಬಿಲ್ಲ. 'ಪೇವರ್ಸ್'ನ ರಕ್ಷಣೆಗೆ ಲೇಪಿಸಿದ ಸಿಮೆಂಟ್ ಕಿತ್ತು ಹೋಗುತ್ತಿದೆ.
ಮಾದರಿ ರಸ್ತೆ ನಿರ್ಮಿಸಬೇಕೆಂದು ಅನುದಾನ ನೀಡಿದರೂ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ನಿಗಮದ ಎಂಜಿನಿಯರ್ಗಳ ನಿರ್ಲಕ್ಷ್ಯದಿಂದ ಕಾಮಗಾರಿ ಕುಂಟುತ್ತಾ ಸಾಗಿದೆ.