ಬೆಳಗಾವಿ ನಗರ ಕಮಿಷನರ್ ಎಂ. ಚಂದ್ರಶೇಖರ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ಕಚೇರಿಗೆ, ಬಾಗಲಕೋಟೆ ಎಸ್ಪಿ ಸಿ. ವಂಶಿಕೃಷ್ಣ ಅವರನ್ನು ಎಸಿಬಿ ದಾವಣಗೆರೆ ವಲಯಕ್ಕೆ, ರೈಲ್ವೆ ಡಿಐಜಿ ಡಾ. ಡಿ.ಸಿ. ರಾಜಪ್ಪ ಅವರನ್ನು ಬೆಳಗಾವಿ ಕಮಿಷನರ್ ಆಗಿ, ಮಂಗಳೂರು ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ಅವರನ್ನು ಮೈಸೂರಿನ ಪೊಲೀಸ್ ತರಬೇತಿ ಅಕಾಡೆಮಿಗೆ, ಸಿ.ಬಿ ರಿಷ್ಯಂತ್ ಬಾಗಲಕೋಟೆ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.