<p>ಅಂಥ ಮಳೆ ಯಾವತ್ತೂ ನೋಡಿರಲಿಲ್ಲ. ಕಾರಿನ ಟಾಪ್ ಮೇಲೆ ಆಲಿಕಲ್ಲು ಬಿದ್ದಂತೆ! ರಸ್ತೆ ಏನೂ ಕಾಣುತ್ತಿಲ್ಲ... ಅಕ್ಕಪಕ್ಕ ಮಿಣುಕು ದೀಪಗಳು ಕಂಡರೆ ಅಲ್ಲಿನ್ನೊಂದು ಕಾರು ತೆವಳುತ್ತಿದೆ ಎಂಬಂತೆ ಕಾಣುತ್ತಿತ್ತು.</p>.<p>ನೆಹರು ಔಟರ್ ರಿಂಗ್ ರೋಡ್ ಅದು. ಹೈದರಾಬಾದ್ ನಗರದಿಂದ ಬೆಂಗಳೂರಿಗೆ ಬರುವಾಗ ಬಿರುಗಾಳಿ, ದೂಳು... ದೂಳಿನಿಂದಲೇ ಅರ್ಧ ಕಂಗೆಟ್ಟಿದ್ದೆವು. ಜೋರು ಮಳೆ. ಕಾರು ಅಡ್ಡಡ್ಡ ಹೋಗುತ್ತಿತ್ತು. ಏನೆಲ್ಲ ನೆನಪುಗಳು.. ಮನೆಯಲ್ಲಿ ಮಕ್ಕಳಿವೆ. ಅಪ್ಪ–ಅಮ್ಮ<br /> ನನ್ನನ್ನೇ ನೆಚ್ಚಿಕೊಂಡಿದ್ದಾರೆ. ಆಗಾಗ ಅಮ್ಮ ಹೇಳುವ ಮಾತು, ನಮ್ಮಿಡೀ ಕುಟುಂಬದ ಕೇಂದ್ರಬಿಂದು ನೀನು, ಏನಾದರೂ ಆದರೆ ಇಡೀ ಕುಟುಂಬವೇ ಚದರುತ್ತದೆ... ಅದ್ಯಾಕೋ ಕಣ್ಣೀರು.. ಬರೀ ನೀರು.. ಒಳಗೂ ಹೊರಗೂ...</p>.<p>ಪಟ್ಟಣಚೆರುವಿನಿಂದ ವರ್ತುಲ ರಸ್ತೆ ಹತ್ತಿದವರು, ಬೆಂಗಳೂರು ಹೆದ್ದಾರಿಯಲ್ಲಿ ಇಳಿಯುವವರೆಗೂ ಜೀವ ಅಂಗೈಯಲ್ಲಿತ್ತು.</p>.<p>ಕಾರಿನ ಗಾಜಿಗೆ ಬೀಳುವ ನೀರಿಗೆ ವೈಪರ್ಗಳಿದ್ದವು. ಕಣ್ಣೊಳಗಿದ್ದ ಪಸೆ ಕರಗಿದ್ದು, ಜಡಚರ್ಲಾ ಬಳಿ ಎಳೆಬಿಸಿಲು ಕಂಡಾಗಲೇ! ಎಲ್ಲ ಮಳೆಗಳಲ್ಲಿ ಜೀವನಪ್ರೀತಿಯನ್ನೇ ನೆನೆದಿದ್ದೆ. ಆದರೆ, ಈ ಮಳೆಯಲ್ಲಿ ನೆನೆಯದಿದ್ದರೂ ಎಲ್ಲರನ್ನೂ ನೆನೆಸಿ ಕೊಂಡಿದ್ದೆ. ಈ ಮಳೆಯನ್ನು ಮರೆಯುವುದೆಂತು?<br /> <em><strong>–ಅರ್ಪಣಾ, ಬೆಂಗಳೂರು</strong></em></p>.<p><em><strong>*</strong></em><br /> <strong>ಮಳೆ ಕುರಿತ ನಿಮ್ಮ ನೆನಪುಗಳನ್ನು ಈ ವಿಳಾಸಕ್ಕೆ ಕಳಿಸಿ: gulmoharpv@prajavani.co.in</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಂಥ ಮಳೆ ಯಾವತ್ತೂ ನೋಡಿರಲಿಲ್ಲ. ಕಾರಿನ ಟಾಪ್ ಮೇಲೆ ಆಲಿಕಲ್ಲು ಬಿದ್ದಂತೆ! ರಸ್ತೆ ಏನೂ ಕಾಣುತ್ತಿಲ್ಲ... ಅಕ್ಕಪಕ್ಕ ಮಿಣುಕು ದೀಪಗಳು ಕಂಡರೆ ಅಲ್ಲಿನ್ನೊಂದು ಕಾರು ತೆವಳುತ್ತಿದೆ ಎಂಬಂತೆ ಕಾಣುತ್ತಿತ್ತು.</p>.<p>ನೆಹರು ಔಟರ್ ರಿಂಗ್ ರೋಡ್ ಅದು. ಹೈದರಾಬಾದ್ ನಗರದಿಂದ ಬೆಂಗಳೂರಿಗೆ ಬರುವಾಗ ಬಿರುಗಾಳಿ, ದೂಳು... ದೂಳಿನಿಂದಲೇ ಅರ್ಧ ಕಂಗೆಟ್ಟಿದ್ದೆವು. ಜೋರು ಮಳೆ. ಕಾರು ಅಡ್ಡಡ್ಡ ಹೋಗುತ್ತಿತ್ತು. ಏನೆಲ್ಲ ನೆನಪುಗಳು.. ಮನೆಯಲ್ಲಿ ಮಕ್ಕಳಿವೆ. ಅಪ್ಪ–ಅಮ್ಮ<br /> ನನ್ನನ್ನೇ ನೆಚ್ಚಿಕೊಂಡಿದ್ದಾರೆ. ಆಗಾಗ ಅಮ್ಮ ಹೇಳುವ ಮಾತು, ನಮ್ಮಿಡೀ ಕುಟುಂಬದ ಕೇಂದ್ರಬಿಂದು ನೀನು, ಏನಾದರೂ ಆದರೆ ಇಡೀ ಕುಟುಂಬವೇ ಚದರುತ್ತದೆ... ಅದ್ಯಾಕೋ ಕಣ್ಣೀರು.. ಬರೀ ನೀರು.. ಒಳಗೂ ಹೊರಗೂ...</p>.<p>ಪಟ್ಟಣಚೆರುವಿನಿಂದ ವರ್ತುಲ ರಸ್ತೆ ಹತ್ತಿದವರು, ಬೆಂಗಳೂರು ಹೆದ್ದಾರಿಯಲ್ಲಿ ಇಳಿಯುವವರೆಗೂ ಜೀವ ಅಂಗೈಯಲ್ಲಿತ್ತು.</p>.<p>ಕಾರಿನ ಗಾಜಿಗೆ ಬೀಳುವ ನೀರಿಗೆ ವೈಪರ್ಗಳಿದ್ದವು. ಕಣ್ಣೊಳಗಿದ್ದ ಪಸೆ ಕರಗಿದ್ದು, ಜಡಚರ್ಲಾ ಬಳಿ ಎಳೆಬಿಸಿಲು ಕಂಡಾಗಲೇ! ಎಲ್ಲ ಮಳೆಗಳಲ್ಲಿ ಜೀವನಪ್ರೀತಿಯನ್ನೇ ನೆನೆದಿದ್ದೆ. ಆದರೆ, ಈ ಮಳೆಯಲ್ಲಿ ನೆನೆಯದಿದ್ದರೂ ಎಲ್ಲರನ್ನೂ ನೆನೆಸಿ ಕೊಂಡಿದ್ದೆ. ಈ ಮಳೆಯನ್ನು ಮರೆಯುವುದೆಂತು?<br /> <em><strong>–ಅರ್ಪಣಾ, ಬೆಂಗಳೂರು</strong></em></p>.<p><em><strong>*</strong></em><br /> <strong>ಮಳೆ ಕುರಿತ ನಿಮ್ಮ ನೆನಪುಗಳನ್ನು ಈ ವಿಳಾಸಕ್ಕೆ ಕಳಿಸಿ: gulmoharpv@prajavani.co.in</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>