ಕಣ್ಣಿಗೆ ಗಾಜಿನ ಪಟ್ಟಿಗಳನ್ನು ಕಟ್ಟಿಕೊಂಡು ನದಿಯಲ್ಲಿ ಮುಳುಗಿ ಚಿಲ್ಲರೆ ಕಾಸು ಮತ್ತು ಚಿನ್ನ, ಬೆಳ್ಳಿಯ ಚೂರುಗಳಿಗೆ ತಡಕಾಟ ನಡೆಸಿದರು. ಮಹಾಲಯ ಅಮಾವಾಸ್ಯೆಯಂದು ಪಿತೃಗಳಿಗೆ ತರ್ಪಣ ಅರ್ಪಿಸುವ ಜನರು ಕಾಸು, ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ನದಿಗೆ ಎಸೆಯುವ ಸಂಪ್ರದಾಯ ಇದೆ. ಹೀಗೆ ಎಸೆಯುವ ವಸ್ತುಗಳನ್ನು ನೀರಿನಾಳದಿಂದ ಹೆಕ್ಕಿ ತೆಗೆದು ಹೊಟ್ಟೆ ತುಂಬಿಸಿಕೊಳ್ಳುವ ಕಾಯಕವನ್ನು ಈ ಅಲೆಮಾರಿ ಜನರು ಮಾಡುತ್ತಾರೆ.