‘ಆಂಧ್ರಪ್ರದೇಶದಿಂದ ಒಂದು ಕೆ.ಜಿ ಕರಬೂಜ ಬೀಜಕ್ಕೆ ₹ 25 ಸಾವಿರ ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಹನಿನೀರಾವರಿ, ಬಿತ್ತನೆ, ಬೀಜ, ಕೀಟನಾಶಕ್ಕೆ ₹ 4 ಲಕ್ಷ ಖರ್ಚಾಗಿದೆ. ಬೇಸಿಗೆ ಸಮಯದಲ್ಲಿ ಭಾರಿ ಬೇಡಿಕೆ ಇರುತ್ತದೆ. ಮಳೆ ಇಲ್ಲದಿದ್ದರೂ ಒಂದು ಹಣ್ಣು ಮೂರು ಕೆಜಿವರೆಗೂ ತೂಗುವಂತೆ ಉತ್ತಮ ಇಳುವರಿ ಬಂದಿದೆ. ಮಾರ್ಗದರ್ಶನದ ಕೊರತೆಯಿಂದ ಬೀಜ ಬಿತ್ತನೆ ತಡವಾಯಿತು. ಮಳೆಗಾಲದಲ್ಲಿ ಫಸಲು ಬಂದಿರುವುದರಿಂದ ಬೆಲೆ ಕುಸಿತಗೊಂಡಿದೆ’ ಎನ್ನುತ್ತಾರೆ ಈರಮ್ಮ.