‘ಶಾಲೆಯ ಮುಖ್ಯಶಿಕ್ಷಕಿಯಾಗಿರುವ ನನ್ನ ಪತ್ನಿ ಗಾಯತ್ರಿ ಅನಾರೋಗ್ಯ ನಿಮಿತ್ತ ಶಾಲೆಗೆ ಬಂದಿಲ್ಲ. ಶಾಲೆ ಮುಚ್ಚುವುದು ಬೇಡ ಎಂದು ನಾನೇ ತರಗತಿಗೆ ಬಂದಿದ್ದೇನೆ. ಶಾಲೆಯಲ್ಲಿ ಕಳೆದ ವರ್ಷ ನಾನು ಅತಿಥಿ ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ. ಪ್ರಸಕ್ತ ವರ್ಷ ಬರುವುದಿಲ್ಲ ಎಂದು ತಿಳಿಸಿದ್ದೇನೆ. ಶಾಲೆಗೆ ಶಾಶ್ವತವಾಗಿ ಶಿಕ್ಷಕರನ್ನು ನೀಡಿದರೆ ಅನುಕೂಲವಾಗುತ್ತದೆ’ ಎಂದು ಶಿವಾನಂದ ಬೀಳ್ವಾರ ‘ಪ್ರಜಾವಾಣಿ’ಗೆ ತಿಳಿಸಿದರು.