ಆದಿಚುಂಚನಗಿರಿ ಸ್ವಾಮಿಗಳಿಗೆ ನಗರದ ಭಕ್ತವೃಂದದ ಶ್ರದ್ಧೆ, ಗೌರವದ ಸ್ವಾಗತ
ಬೆಂಗಳೂರು, ಜೂ. 17– ಸಂಸ್ಥಾನಾಧಿಕಾರ ಸ್ವೀಕರಿಸಿದ ಬಳಿಕ ಬೆಂಗಳೂರಿಗೆ ಪ್ರಥಮವಾಗಿ ದರ್ಶನ ನೀಡುತ್ತಿರುವ ಆದಿಚುಂಚನಗಿರಿಯ 70ನೇ ಮಠಾಧೀಶ ಶ್ರೀ ಜಗದ್ಗುರು ಶ್ರೀರಾಮಾನಂದನಾಥ ಸ್ವಾಮಿಗಳವರಿಗೆ ನಗರದ ಸಹಸ್ರಾರು ಆಸ್ತಿಕರ ವೃಂದ, ಶ್ರದ್ಧೆಯ ಸ್ವಾಗತ ಬಯಸಿ, ಭಕ್ತಿಯ ನಮನ ಅರ್ಪಿಸಿತು.