ದೇಶದಲ್ಲಿ ಎರಡನೇ ಅಲೆಯ ರೂಪದಲ್ಲಿ ಅಪ್ಪಳಿಸಿ ಅಪಾರ ಸಾವುನೋವಿಗೆ ಕಾರಣವಾಗಿರುವುದು ಕೋವಿಡ್ ಅಲ್ಲ. ಬದಲಾಗಿ, 5ಜಿ ನಿಸ್ತಂತು ದೂರವಾಣಿ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗವೇ ಈ ಅವಘಡಕ್ಕೆ ಕಾರಣ ಎಂಬ ಸಂದೇಶವೊಂದು ಹರಿದಾಡುತ್ತಿದೆ. 4ಜಿ ತರಂಗಾಂತರಗಳ ಬಿಡುಗಡೆಯಿಂದ ಪಕ್ಷಿಗಳು ಮೃತಪಟ್ಟಿದ್ದು ಇದೇ ಕಾರಣಕ್ಕೆ. ಹೀಗಾಗಿ ದೇಶದಲ್ಲಿ 5ಜಿ ಪರೀಕ್ಷೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.