ಇತ್ತೀಚೆಗೆ ಕೇರಳದ ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡಿತ್ತು. ಒಬ್ಬ ಬಾಲಕ ಉಸಿರುಗಟ್ಟಿ ಮೃತಪಟ್ಟ ಘಟನೆಯೂ ನಡೆಯಿತು. ಫೋಟೊದಲ್ಲಿ ಇರುವ ಬಾಲಕ ತನ್ನ ತಂದೆಯೊಂದಿಗೆ ಶಬರಿಮಲೆಗೆ ಭೇಟಿ ನೀಡಿದ್ದ. ಜನಸಂದಣಿಯಲ್ಲಿ ತಂದೆಯಿಂದ ಆತ ತಪ್ಪಿಸಿಕೊಂಡು ಕೇರಳ ಸಾರಿಗೆ ವಾಹನ ಹತ್ತಿದ್ದ. ಈ ವೇಳೆ ಆತ ಪೋಲೀಸರಿಗೆ ಕೈಮುಗಿದು ತಂದೆಯೊಂದಿಗೆ ಕಳುಹಿಸಿಕೊಡಲು ಬೇಡಿಕೊಂಡಿದ್ದ. ನಂತರ, ತಂದೆಯೊಂದಿಗೆ ಬಾಲಕನ್ನು ಪೊಲೀಸರು ಸೇರಿಸಿದ್ದಾರೆ. ಈ ಬಗ್ಗೆ ಹಲವು ಸುದ್ದಿ ಸಂಸ್ಥೆಗಳು ವಿಡಿಯೊ ಸಹಿತ ವರದಿ ಮಾಡಿದ್ದವು. ಜೊತೆಗೆ, ಕೇರಳ ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಬಾಲಕನನ್ನು ನಾವು ವಶಕ್ಕೆ ಪಡೆದಿರಲಿಲ್ಲ ಎಂದಿದ್ದಾರೆ. ಆದ್ದರಿಂದ, ಹಿಂದೂ ಬಾಲಕರನ್ನೂ ಕೇರಳ ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ ಎನ್ನುವುದು ಸುಳ್ಳು ಸುದ್ದಿ ಎಂದು ಬೂಮ್ಲೈವ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ.