ಬೆಂಗಳೂರು ಒನ್ನಲ್ಲಿ ಅಕ್ರಮವಾಗಿ ನೋಟು ಬದಲಾವಣೆ: ಉನ್ನತ ತನಿಖೆಗೆ ವಹಿಸಿ
₹500 ಮತ್ತು ₹100 ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧಿಸಿದ ಬಳಿಕ ನಡೆದಿರುವ ಅಕ್ರಮ ಬದಲಾವಣೆ ಬಗ್ಗೆ ಮತ್ತೊಂದು ಟ್ವೀಟ್ ಮಾಡಿರುವ ಬಿಎಸ್ವೈ, ‘ಅಮಾನ್ಯೀಕರಣ ವೇಳೆ ಕಾಂಗ್ರೆಸ್ ನಾಯಕರು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು, 'ಬೆಂಗಳೂರು ಒನ್' ಕೇಂದ್ರಗಳಲ್ಲಿ ₹410 ಕೋಟಿ ನಗದನ್ನು ಅಕ್ರಮವಾಗಿ ಬದಲಾಯಿಸಿದ್ದಾರೆ. ಇದಕ್ಕೆ ಸಂಬಂಧಿಸಿದ 235 ಪುಟಗಳ ದಾಖಲೆ ಬಿಡುಗಡೆ ಮಾಡಲಾಗಿದೆ. ಕುಮಾರಸ್ವಾಮಿಯವರು ನಿಜವಾಗಿಯೂ ಭ್ರಷ್ಟಾಚಾರದ ವಿರೋಧಿಯಾಗಿದ್ದರೆ ಪ್ರಕರಣವನ್ನು ಉನ್ನತ ತನಿಖೆಗೆ ವಹಿಸಲಿ’ ಎಂದು ಒತ್ತಾಯಿಸಿದ್ದಾರೆ.