ನವದೆಹಲಿ(ಪಿಟಿಐ): 15 ನೇ ಲೋಕಸಭೆ ವಿಸರ್ಜನೆಗೆ ಸಚಿವ ಸಂಪುಟ ಶನಿವಾರ ಶಿಫಾರಸು ಮಾಡಿತು. ಅತಿ ಹೆಚ್ಚು ಬಾರಿ ಅಡೆತಡೆ ಎದುರಿಸಿದ ಲೋಕಸಭೆ ಎಂಬ ಅಪಖ್ಯಾತಿ ಈ ಅವಧಿಗೆ ಸೇರಿದೆ. ಚುನಾವಣಾ ಫಲಿತಾಂಶ ಪ್ರಕಟ ವಾಗುವ ಹಿಂದಿನ ದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಸೇರಿದ್ದ ಕೊನೆಯ ಸಂಪುಟ ಲೋಕಸಭೆ ವಿಸರ್ಜನೆಗೆ ಒಪ್ಪಿಗೆ ನೀಡಿತ್ತು.
ಚುನಾವಣಾ ಆಯೋಗ ಅಧಿಸೂಚನೆ ಯನ್ನು ಹೊಸದಾಗಿ ಆಯ್ಕೆ ಮಾಡಿದ ಸಂಸದರಿಗೆ ಕಳುಹಿಸಿದ ನಂತರ ಹೊಸ ಲೋಕ ಸಭೆ ರಚನೆಯ ಪ್ರಕ್ರಿಯೆ ಆರಂಭವಾಗಲಿದೆ.
15 ನೇ ಲೋಕಸಭೆಯಲ್ಲಿ ಮೂವರು ಮಹಿಳೆಯರು ಪ್ರಮುಖ ಸ್ಥಾನದಲ್ಲಿದ್ದುದು ವಿಶೇಷವಾಗಿತ್ತು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಸ್ಪೀಕರ್ ಮೀರಾ ಕುಮಾರ್್ ಮತ್ತು ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಸದನದಲ್ಲಿದ್ದರು. ಇವರಲ್ಲಿ ಸೋನಿಯಾ ಮತ್ತು ಸುಷ್ಮಾ 16 ನೇ ಲೋಕಸಭೆಗೆ ಆಯ್ಕೆ ಯಾಗಿದ್ದರೆ, ಮೀರಾ ಕುಮಾರ್ ಬಿಹಾರದ ಸಾಸಾರಾಂ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ.
16ನೇ ಲೋಕಸಭೆ ಪಕ್ಷಗಳ ಬಲಾಬಲ