<p><strong>ಕೋಲ್ಕತ್ತ</strong>: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬರೆದ ಮೂರು ಪುಸ್ತಕಗಳನ್ನು ಭಾನುವಾರ ಬಿಡುಗಡೆಗೊಳಿಸಲಾಯಿತು.</p><p>48ನೇ ಅಂತರರಾಷ್ಟ್ರೀಯ ಕೋಲ್ಕತ್ತ ಪುಸ್ತಕ ಮೇಳದಲ್ಲಿ ಬ್ಯಾನರ್ಜಿ ಅವರ ಸುದೀರ್ಘ ರಾಜಕೀಯ ಅನುಭವಗಳನ್ನು ಒಳಗೊಂಡ ಮೂರು ಪುಸ್ತಕಗಳನ್ನು ಡೇಸ್ ಪಬ್ಲಿಷಿಂಗ್ ಹೊರತಂದಿದೆ. </p><p>ಮಮತಾ ಬರೆದ ಮೂರು ಹೊಸ ಪುಸ್ತಕಗಳ ಪೈಕಿ 'ಲಿಪಿಬೊಡ್ಡೋ ಕಿಚು ಕಾಜ್' (Lipiboddo Kichu Kaaj) ಹೆಚ್ಚು ಮಾರಾಟವಾದ ಪುಸ್ತಕವಾಗಿದೆ. ಈ ಪುಸ್ತಕವು ಬ್ಯಾನರ್ಜಿ ಅವರು ರೈಲ್ವೆ ಸಚಿವೆಯಾಗಿದ್ದಾಗ ಹಾಗೂ ಮುಖ್ಯಮಂತ್ರಿಯಾದ ಬಳಿಕ ಎದುರಾದ ರಾಜಕೀಯ ಸನ್ನಿವೇಶಗಳ ಕುರಿತಾಗಿದೆ.</p>.ಮಕ್ಕಳು ಧೂಮಪಾನ ಮಾಡಿದರೆ ಏನು ಮಾಡಬಹುದು?: ವೈದ್ಯರ ಉತ್ತರ ಹೀಗಿದೆ....ಪರೀಕ್ಷೆಗಳಿಗೆ ತಯಾರಾಗಲು ‘SMART’ ತಂತ್ರ. <p>'ಬಂಗ್ಲಾರ್ ನಿರ್ಬಚೋಂ ಓ ಅಮ್ರಾ' (ನಾವು ಮತ್ತು ಬಂಗಾಳದ ಚುನಾವಣೆಗಳು) ಈ ಪುಸ್ತಕದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಚುನಾವಣೆ ಸಂದರ್ಭದಲ್ಲಿ ಎದುರಿಸಿದ ಸವಾಲುಗಳ ಬಗೆಗಿನ ಘಟನೆಗಳನ್ನು ವಿವರಿಸಲಾಗಿದೆ. </p><p>ಮತ್ತೊಂದು ಪುಸ್ತಕ ‘ಸೆಲ್ಯೂಟ್ 2‘ನಲ್ಲಿ ಬ್ಯಾನರ್ಜಿ ಅವರು ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕವಿತೆಗಳನ್ನು ರಚಿಸುವ ಮೂಲಕ ಸುಮಾರು 50 ಗಣ್ಯ ವ್ಯಕ್ತಿಗಳಿಗೆ ಗೌರವ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.</p><p>'ನನಗೆ ಸಾಹಿತ್ಯ ಮತ್ತು ಬರವಣಿಗೆ ಎಂದರೆ ಬಹಳ ಪ್ರೀತಿ. ಕೆಲಸದ ನಡುವೆಯೂ ನಾನು ನನ್ನ ಆಲೋಚನೆಗಳನ್ನು ಬರಹ ರೂಪಕ್ಕೆ ತರುತ್ತೇನೆ ಉಳಿದದ್ದನ್ನು ಪ್ರಕಾಶಕರು ನೋಡಿಕೊಳ್ಳುತ್ತಾರೆ' ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಬ್ಯಾನರ್ಜಿ ಹೇಳಿದ್ದರು.</p><p>ಬ್ಯಾನರ್ಜಿ ಅವರು ಈವರೆಗೂ ಸುಮಾರು 150ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.</p>.ದೆಹಲಿ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಅಮಿತ್ ಶಾ ಭೇಟಿಯಾದ ಜೆ.ಪಿ. ನಡ್ಡಾ.ವಿಶ್ಲೇಷಣೆ: ಭಾಷಾ ಸಾಮರ್ಥ್ಯ ಮತ್ತು ಅಂಧನಂಬಿಕೆ .ವಾಲ್ಮೀಕಿ ರಾಮ, ಅಯೋಧ್ಯೆ ರಾಮ ಬೇರೆ: ಎಚ್.ಸಿ.ಮಹದೇವಪ್ಪ .Singapore: ಹಿಂದೂ ದೇವಾಲಯ ಪವಿತ್ರೀಕರಣ; 10 ಸಾವಿರ ಭಕ್ತರೊಂದಿಗೆ PM ವಾಂಗ್ ಭಾಗಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬರೆದ ಮೂರು ಪುಸ್ತಕಗಳನ್ನು ಭಾನುವಾರ ಬಿಡುಗಡೆಗೊಳಿಸಲಾಯಿತು.</p><p>48ನೇ ಅಂತರರಾಷ್ಟ್ರೀಯ ಕೋಲ್ಕತ್ತ ಪುಸ್ತಕ ಮೇಳದಲ್ಲಿ ಬ್ಯಾನರ್ಜಿ ಅವರ ಸುದೀರ್ಘ ರಾಜಕೀಯ ಅನುಭವಗಳನ್ನು ಒಳಗೊಂಡ ಮೂರು ಪುಸ್ತಕಗಳನ್ನು ಡೇಸ್ ಪಬ್ಲಿಷಿಂಗ್ ಹೊರತಂದಿದೆ. </p><p>ಮಮತಾ ಬರೆದ ಮೂರು ಹೊಸ ಪುಸ್ತಕಗಳ ಪೈಕಿ 'ಲಿಪಿಬೊಡ್ಡೋ ಕಿಚು ಕಾಜ್' (Lipiboddo Kichu Kaaj) ಹೆಚ್ಚು ಮಾರಾಟವಾದ ಪುಸ್ತಕವಾಗಿದೆ. ಈ ಪುಸ್ತಕವು ಬ್ಯಾನರ್ಜಿ ಅವರು ರೈಲ್ವೆ ಸಚಿವೆಯಾಗಿದ್ದಾಗ ಹಾಗೂ ಮುಖ್ಯಮಂತ್ರಿಯಾದ ಬಳಿಕ ಎದುರಾದ ರಾಜಕೀಯ ಸನ್ನಿವೇಶಗಳ ಕುರಿತಾಗಿದೆ.</p>.ಮಕ್ಕಳು ಧೂಮಪಾನ ಮಾಡಿದರೆ ಏನು ಮಾಡಬಹುದು?: ವೈದ್ಯರ ಉತ್ತರ ಹೀಗಿದೆ....ಪರೀಕ್ಷೆಗಳಿಗೆ ತಯಾರಾಗಲು ‘SMART’ ತಂತ್ರ. <p>'ಬಂಗ್ಲಾರ್ ನಿರ್ಬಚೋಂ ಓ ಅಮ್ರಾ' (ನಾವು ಮತ್ತು ಬಂಗಾಳದ ಚುನಾವಣೆಗಳು) ಈ ಪುಸ್ತಕದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಚುನಾವಣೆ ಸಂದರ್ಭದಲ್ಲಿ ಎದುರಿಸಿದ ಸವಾಲುಗಳ ಬಗೆಗಿನ ಘಟನೆಗಳನ್ನು ವಿವರಿಸಲಾಗಿದೆ. </p><p>ಮತ್ತೊಂದು ಪುಸ್ತಕ ‘ಸೆಲ್ಯೂಟ್ 2‘ನಲ್ಲಿ ಬ್ಯಾನರ್ಜಿ ಅವರು ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕವಿತೆಗಳನ್ನು ರಚಿಸುವ ಮೂಲಕ ಸುಮಾರು 50 ಗಣ್ಯ ವ್ಯಕ್ತಿಗಳಿಗೆ ಗೌರವ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.</p><p>'ನನಗೆ ಸಾಹಿತ್ಯ ಮತ್ತು ಬರವಣಿಗೆ ಎಂದರೆ ಬಹಳ ಪ್ರೀತಿ. ಕೆಲಸದ ನಡುವೆಯೂ ನಾನು ನನ್ನ ಆಲೋಚನೆಗಳನ್ನು ಬರಹ ರೂಪಕ್ಕೆ ತರುತ್ತೇನೆ ಉಳಿದದ್ದನ್ನು ಪ್ರಕಾಶಕರು ನೋಡಿಕೊಳ್ಳುತ್ತಾರೆ' ಎಂದು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಬ್ಯಾನರ್ಜಿ ಹೇಳಿದ್ದರು.</p><p>ಬ್ಯಾನರ್ಜಿ ಅವರು ಈವರೆಗೂ ಸುಮಾರು 150ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.</p>.ದೆಹಲಿ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಅಮಿತ್ ಶಾ ಭೇಟಿಯಾದ ಜೆ.ಪಿ. ನಡ್ಡಾ.ವಿಶ್ಲೇಷಣೆ: ಭಾಷಾ ಸಾಮರ್ಥ್ಯ ಮತ್ತು ಅಂಧನಂಬಿಕೆ .ವಾಲ್ಮೀಕಿ ರಾಮ, ಅಯೋಧ್ಯೆ ರಾಮ ಬೇರೆ: ಎಚ್.ಸಿ.ಮಹದೇವಪ್ಪ .Singapore: ಹಿಂದೂ ದೇವಾಲಯ ಪವಿತ್ರೀಕರಣ; 10 ಸಾವಿರ ಭಕ್ತರೊಂದಿಗೆ PM ವಾಂಗ್ ಭಾಗಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>