ಆಗ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಇಂದೋರ್ ಪೊಲೀಸ್ ಉಪ ಮಹಾನಿರ್ದೇಶಕ ಎಚ್.ಸಿ.ಮಿಶ್ರಾ, ‘ರಾಜ್ವಾಡಾ ಪ್ರದೇಶದ ವಾಣಿಜ್ಯ ಕಟ್ಟಡವೊಂದರ ಕೆಳಮಹಡಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ತಂದೆ–ತಾಯಿ ಜೊತೆ ನಿದ್ರಿಸುತ್ತಿದ್ದ ಮಗುವನ್ನು ಅಪಹರಿಸಿ ಅತ್ಯಾಚಾರಗೈದಿದ್ದ ಸುನೀಲ್ ಭೀಲ್ ಎಂಬಾತ ಬಳಿಕ ಕೊಲೆ ಮಾಡಿದ್ದ’ ಎಂದು ಹೇಳಿದ್ದರು.