ಶ್ರೀಲಂಕಾದಲ್ಲಿ ನಾಗರಿಕ ಯುದ್ಧ ಮುಕ್ತಾಯವಾದ ಬಳಿಕ ಹುಟ್ಟಿಕೊಂಡಿದ್ದೇ ಈ ರಾಜಕೀಯ ಸಂಘಟನೆ. ನಟ, ನಿರ್ದೇಶಕ ಸೀಮನ್ ಅವರನೇತೃತ್ವದಲ್ಲಿ ಆರಂಭವಾದ ಪಕ್ಷವು, ವೇಲುಪಿಳ್ಳೈ ಪ್ರಭಾಕರನ್ ಅವರ ಸಿದ್ಧಾಂತಗಳನ್ನು ಬಹಿರಂಗವಾಗಿ ಆರಾಧಿಸುವ ಮೂಲಕ ಸುದ್ದಿಯಾಗಿತ್ತು. ರಾಜಕೀಯ ಅಧಿಕಾರವನ್ನು ಸ್ಥಳೀಯ ತಮಿಳರಿಗೆ ಮಾತ್ರ ವಹಿಸಬೇಕೇ ಹೊರತು ಹೊರಗಿನವರು ಅಲ್ಲ ಎಂಬುದು ಈ ಪಕ್ಷದ ಸಿದ್ಧಾಂತ.