<p><strong>ಬರೇಲಿ: </strong>‘ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಿಗೆ ನುಗ್ಗಿ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗುವ ಪ್ರಕರಣಗಳು ಹೆಚ್ಚುತ್ತಿವೆ. ಅವರೇನು ಪಾಕಿಸ್ತಾನೀಯರಾ’ ಎಂದು ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಘವೇಂದ್ರ ವಿಕ್ರಂ ಸಿಂಗ್ ಖಾರವಾಗಿ ಪ್ರಶ್ನಿಸಿದ್ದಾರೆ.</p>.<p>‘ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಿಗೆ ನುಗ್ಗಿ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ ಗಲಭೆ ಸೃಷ್ಟಿಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ’ ಎಂದು ರಾಘವೇಂದ್ರ ವಿಕ್ರಂ ಸಿಂಗ್ ಅವರು ಭಾನುವಾರ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಅದು ಟ್ರೆಂಡ್ ಆಗಿತ್ತು ಎಂದು <a href="https://timesofindia.indiatimes.com/city/bareilly/bareilly-dm-questions-trend-of-entering-muslim-localities-raising-anti-pak-slogans/articleshow/62700714.cms?utm_source=twitter.com&utm_medium=social&utm_campaign=TOIDesktop" target="_blank">ಟೈಮ್ಸ್ ಆಫ್ ಇಂಡಿಯಾ </a>ವರದಿ ಮಾಡಿದೆ. ಆದರೆ, ಸದ್ಯ ಅವರ ಫೇಸ್ಬುಕ್ ಪುಟದಲ್ಲಿ ಈ ಸಂದೇಶ ಕಾಣಿಸುತ್ತಿಲ್ಲ.</p>.<p>ಉತ್ತರ ಪ್ರದೇಶದ ಕಾಸ್ಗಂಜ್ ಗಲಭೆಯನ್ನು ಉಲ್ಲೇಖಿಸಿ ಅವರು ಈ ಸಂದೇಶ ಪ್ರಕಟಿಸಿದ್ದರು ಎನ್ನಲಾಗಿದೆ. ಗಣರಾಜ್ಯೋತ್ಸವದಂದು ನಡೆದಿದ್ದ ಗಲಭೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟದ್ದರು. ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.</p>.<p>ಇದಾದ ಎರಡು ದಿನಗಳ ನಂತರ ಮ್ಯಾಜಿಸ್ಟ್ರೇಟರು, ‘ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಬಲವಂತವಾಗಿ ಮೆರವಣಿಗೆ ನಡೆಸುವುದು, ಅಲ್ಲಿ ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗುವುದು ಟ್ರೆಂಡ್ ಆಗಿಬಿಟ್ಟಿದೆ. ಯಾಕೆ? ಅವರೇನು ಪಾಕಿಸ್ತಾನದವರಾ?’ ಎಂದು ಫೇಸ್ಬುಕ್ನಲ್ಲಿ ಸಂದೇಶ ಪ್ರಕಟಿಸಿದ್ದರು.</p>.<p>ಮತ್ತೊಂದು ಸಂದೇಶದಲ್ಲಿ, ‘ಅತಿ ದೊಡ್ಡ ಶತ್ರುವಾಗಿರುವ ಚೀನಾದ ವಿರುದ್ಧ ಯಾಕೆ ಈ ಜನರು ಘೋಷಣೆ ಕೂಗುವುದಿಲ್ಲ?’ ಎಂದು ಪ್ರಶ್ನಿಸಿದ್ದಾರೆ.</p>.<p>‘ದೇಶಭಕ್ತಿ’ಯ ಹೆಸರಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನಾವಳಿಗಳು ಸಿಟ್ಟು ಬರಿಸಿವೆ ಎದು ರಾಘವೇಂದ್ರ ವಿಕ್ರಂ ಸಿಂಗ್ ಹೇಳಿಕೆ ನೀಡಿರುವುದಾಗಿಯೂ <strong>ಟೈಮ್ಸ್ ಆಫ್ ಇಂಡಿಯಾ</strong> ವರದಿ ಉಲ್ಲೇಖಿಸಿದೆ.</p>.<p><strong>ಇವನ್ನೂ ಓದಿ...</strong></p>.<p>* <a href="http://www.prajavani.net/news/article/2018/01/28/550321.html" target="_blank">ಕಾಸ್ಗಂಜ್ ಹಿಂಸಾಚಾರ: ಇಂಟರ್ನೆಟ್ ಸೇವೆ ಸ್ಥಗಿತ, ನಿಷೇಧಾಜ್ಞೆ ಜಾರಿ</a></p>.<p>* <a href="http://www.prajavani.net/news/article/2018/01/29/550604.html" target="_blank">ಕಾಸ್ಗಂಜ್ ಹಿಂಸಾಚಾರ: ಘಟನೆ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು - ಗವರ್ನರ್ ರಾಮ್ ನಾಯ್ಕ್</a></p>.<p>* <a href="http://www.prajavani.net/news/article/2018/01/29/550606.html" target="_blank">ಧರ್ಮದ ಹೆಸರಲ್ಲಿ ಬೇರಾದವರು, ನೋವಿನಲ್ಲಿ ಒಂದಾದರು: ನ್ಯಾಯಕ್ಕಾಗಿ ಹೋರಾಡುತ್ತಿವೆ ಬಂಧಿತರ ಕುಟುಂಬಗಳು</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬರೇಲಿ: </strong>‘ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಿಗೆ ನುಗ್ಗಿ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗುವ ಪ್ರಕರಣಗಳು ಹೆಚ್ಚುತ್ತಿವೆ. ಅವರೇನು ಪಾಕಿಸ್ತಾನೀಯರಾ’ ಎಂದು ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಘವೇಂದ್ರ ವಿಕ್ರಂ ಸಿಂಗ್ ಖಾರವಾಗಿ ಪ್ರಶ್ನಿಸಿದ್ದಾರೆ.</p>.<p>‘ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಿಗೆ ನುಗ್ಗಿ ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ ಗಲಭೆ ಸೃಷ್ಟಿಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ’ ಎಂದು ರಾಘವೇಂದ್ರ ವಿಕ್ರಂ ಸಿಂಗ್ ಅವರು ಭಾನುವಾರ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಅದು ಟ್ರೆಂಡ್ ಆಗಿತ್ತು ಎಂದು <a href="https://timesofindia.indiatimes.com/city/bareilly/bareilly-dm-questions-trend-of-entering-muslim-localities-raising-anti-pak-slogans/articleshow/62700714.cms?utm_source=twitter.com&utm_medium=social&utm_campaign=TOIDesktop" target="_blank">ಟೈಮ್ಸ್ ಆಫ್ ಇಂಡಿಯಾ </a>ವರದಿ ಮಾಡಿದೆ. ಆದರೆ, ಸದ್ಯ ಅವರ ಫೇಸ್ಬುಕ್ ಪುಟದಲ್ಲಿ ಈ ಸಂದೇಶ ಕಾಣಿಸುತ್ತಿಲ್ಲ.</p>.<p>ಉತ್ತರ ಪ್ರದೇಶದ ಕಾಸ್ಗಂಜ್ ಗಲಭೆಯನ್ನು ಉಲ್ಲೇಖಿಸಿ ಅವರು ಈ ಸಂದೇಶ ಪ್ರಕಟಿಸಿದ್ದರು ಎನ್ನಲಾಗಿದೆ. ಗಣರಾಜ್ಯೋತ್ಸವದಂದು ನಡೆದಿದ್ದ ಗಲಭೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟದ್ದರು. ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.</p>.<p>ಇದಾದ ಎರಡು ದಿನಗಳ ನಂತರ ಮ್ಯಾಜಿಸ್ಟ್ರೇಟರು, ‘ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಬಲವಂತವಾಗಿ ಮೆರವಣಿಗೆ ನಡೆಸುವುದು, ಅಲ್ಲಿ ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗುವುದು ಟ್ರೆಂಡ್ ಆಗಿಬಿಟ್ಟಿದೆ. ಯಾಕೆ? ಅವರೇನು ಪಾಕಿಸ್ತಾನದವರಾ?’ ಎಂದು ಫೇಸ್ಬುಕ್ನಲ್ಲಿ ಸಂದೇಶ ಪ್ರಕಟಿಸಿದ್ದರು.</p>.<p>ಮತ್ತೊಂದು ಸಂದೇಶದಲ್ಲಿ, ‘ಅತಿ ದೊಡ್ಡ ಶತ್ರುವಾಗಿರುವ ಚೀನಾದ ವಿರುದ್ಧ ಯಾಕೆ ಈ ಜನರು ಘೋಷಣೆ ಕೂಗುವುದಿಲ್ಲ?’ ಎಂದು ಪ್ರಶ್ನಿಸಿದ್ದಾರೆ.</p>.<p>‘ದೇಶಭಕ್ತಿ’ಯ ಹೆಸರಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನಾವಳಿಗಳು ಸಿಟ್ಟು ಬರಿಸಿವೆ ಎದು ರಾಘವೇಂದ್ರ ವಿಕ್ರಂ ಸಿಂಗ್ ಹೇಳಿಕೆ ನೀಡಿರುವುದಾಗಿಯೂ <strong>ಟೈಮ್ಸ್ ಆಫ್ ಇಂಡಿಯಾ</strong> ವರದಿ ಉಲ್ಲೇಖಿಸಿದೆ.</p>.<p><strong>ಇವನ್ನೂ ಓದಿ...</strong></p>.<p>* <a href="http://www.prajavani.net/news/article/2018/01/28/550321.html" target="_blank">ಕಾಸ್ಗಂಜ್ ಹಿಂಸಾಚಾರ: ಇಂಟರ್ನೆಟ್ ಸೇವೆ ಸ್ಥಗಿತ, ನಿಷೇಧಾಜ್ಞೆ ಜಾರಿ</a></p>.<p>* <a href="http://www.prajavani.net/news/article/2018/01/29/550604.html" target="_blank">ಕಾಸ್ಗಂಜ್ ಹಿಂಸಾಚಾರ: ಘಟನೆ ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು - ಗವರ್ನರ್ ರಾಮ್ ನಾಯ್ಕ್</a></p>.<p>* <a href="http://www.prajavani.net/news/article/2018/01/29/550606.html" target="_blank">ಧರ್ಮದ ಹೆಸರಲ್ಲಿ ಬೇರಾದವರು, ನೋವಿನಲ್ಲಿ ಒಂದಾದರು: ನ್ಯಾಯಕ್ಕಾಗಿ ಹೋರಾಡುತ್ತಿವೆ ಬಂಧಿತರ ಕುಟುಂಬಗಳು</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>