<p><strong>ಕಾಸ್ಗಂಜ್ (ಉತ್ತರ ಪ್ರದೇಶ):</strong> ಕಾಸ್ಗಂಜ್ನಲ್ಲಿ ನಡೆದಿದ್ದ ಹಿಂಸಾಚಾರದ ವೇಳೆ ಯುವಕನೊಬ್ಬ ಗುಂಡು ಹಾರಿಸುತ್ತಿರುವ <a href="https://www.ndtv.com/india-news/video-shows-last-moments-of-22-year-old-shot-death-in-ups-kasganj-1806663?pfrom=home-topscroll">ವಿಡಿಯೊ</a> ಬಹಿರಂಗವಾಗಿದೆ. ಕೆಲ ಯುವಕರು ಲಾಠಿ ಮತ್ತು ದೊಣ್ಣೆಗಳನ್ನು ಬೀಸುತ್ತಿರುವ ದೃಶ್ಯವೂ ಇರುವ ವಿಡಿಯೊವನ್ನು <a href="https://www.ndtv.com/india-news/video-shows-last-moments-of-22-year-old-shot-death-in-ups-kasganj-1806663?pfrom=home-topscroll" target="_blank">ಎನ್ಡಿಟಿವಿ</a> ಪ್ರಕಟಿಸಿದೆ.</p>.<p>ಗಣರಾಜ್ಯೋತ್ಸವ ದಿನದಂದು ನಡೆಸಲಾಗಿದ್ದ ‘ತಿರಂಗಾ ಯಾತ್ರೆ’ಯ ಸಂದರ್ಭದ ವಿಡಿಯೊದಲ್ಲಿ ಚಂದನ್ ಗುಪ್ತಾ (ಹಿಂಸಾಚಾರದಲ್ಲಿ ಮೃತಪಟ್ಟ ಯುವಕ) ಕಾಣಿಸಿಕೊಂಡಿದ್ದರು. ಇದಾದ ನಂತರದ ಕೆಲವೇ ಕ್ಷಣಗಳಲ್ಲಿ ಗಲಭೆ ನಡೆದಿತ್ತು. ಈ ವೇಳೆ ಅನೇಕ ಯುವಕರು ರಾಷ್ಟ್ರಧ್ವಜವನ್ನು ಹಿಡಿದುಕೊಂಡು ‘ಭಾರತ್ ಮಾತಾ ಕಿ ಜೈ’ ಮತ್ತು ‘ವಂದೇ ಮಾತರಮ್’ ಎಂದು ಘೋಷಣೆ ಕೂಗುತ್ತಾ ಬೈಕ್ಗಳಲ್ಲಿ ರ್ಯಾಲಿ ನಡೆಸಿದ್ದು ಒಂದು ವಿಡಿಯೊದಲ್ಲಿ ಕಂಡುಬಂದಿದೆ.</p>.<p>ಮತ್ತೊಂದು ವಿಡಿಯೊಲ್ಲಿ, ಯುವಕನೊಬ್ಬ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಬಹುಶಃ ಈ ಗುಂಡೇಟಿನಿಂದಲೇ ಚಂದನ್ ಗುಪ್ತಾ ಮೃತಪಟ್ಟಿರಬಹುದು ಎಂದು ಕೆಲವು ಮೂಲಗಳು ಅನುಮಾನ ವ್ಯಕ್ತಪಡಿಸಿವೆ. ಲಾಠಿ ಮತ್ತು ದೊಣ್ಣೆ ಬೀಸುತ್ತಾ ಬಂದ ಯುವಕರು ನಂತರ ಬಸ್ಸು, ಕಾರು, ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಸಮೀಪದ ಕಟ್ಟಡವೊಂದರ ಮೇಲಿನಿಂದ ವಿಡಿಯೊ ಚಿತ್ರೀಕರಿಸಲಾಗಿದೆ.</p>.<p>ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಈವರೆಗೆ ಸುಮಾರು 100 ಮಂದಿಯನ್ನು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸ್ಗಂಜ್ (ಉತ್ತರ ಪ್ರದೇಶ):</strong> ಕಾಸ್ಗಂಜ್ನಲ್ಲಿ ನಡೆದಿದ್ದ ಹಿಂಸಾಚಾರದ ವೇಳೆ ಯುವಕನೊಬ್ಬ ಗುಂಡು ಹಾರಿಸುತ್ತಿರುವ <a href="https://www.ndtv.com/india-news/video-shows-last-moments-of-22-year-old-shot-death-in-ups-kasganj-1806663?pfrom=home-topscroll">ವಿಡಿಯೊ</a> ಬಹಿರಂಗವಾಗಿದೆ. ಕೆಲ ಯುವಕರು ಲಾಠಿ ಮತ್ತು ದೊಣ್ಣೆಗಳನ್ನು ಬೀಸುತ್ತಿರುವ ದೃಶ್ಯವೂ ಇರುವ ವಿಡಿಯೊವನ್ನು <a href="https://www.ndtv.com/india-news/video-shows-last-moments-of-22-year-old-shot-death-in-ups-kasganj-1806663?pfrom=home-topscroll" target="_blank">ಎನ್ಡಿಟಿವಿ</a> ಪ್ರಕಟಿಸಿದೆ.</p>.<p>ಗಣರಾಜ್ಯೋತ್ಸವ ದಿನದಂದು ನಡೆಸಲಾಗಿದ್ದ ‘ತಿರಂಗಾ ಯಾತ್ರೆ’ಯ ಸಂದರ್ಭದ ವಿಡಿಯೊದಲ್ಲಿ ಚಂದನ್ ಗುಪ್ತಾ (ಹಿಂಸಾಚಾರದಲ್ಲಿ ಮೃತಪಟ್ಟ ಯುವಕ) ಕಾಣಿಸಿಕೊಂಡಿದ್ದರು. ಇದಾದ ನಂತರದ ಕೆಲವೇ ಕ್ಷಣಗಳಲ್ಲಿ ಗಲಭೆ ನಡೆದಿತ್ತು. ಈ ವೇಳೆ ಅನೇಕ ಯುವಕರು ರಾಷ್ಟ್ರಧ್ವಜವನ್ನು ಹಿಡಿದುಕೊಂಡು ‘ಭಾರತ್ ಮಾತಾ ಕಿ ಜೈ’ ಮತ್ತು ‘ವಂದೇ ಮಾತರಮ್’ ಎಂದು ಘೋಷಣೆ ಕೂಗುತ್ತಾ ಬೈಕ್ಗಳಲ್ಲಿ ರ್ಯಾಲಿ ನಡೆಸಿದ್ದು ಒಂದು ವಿಡಿಯೊದಲ್ಲಿ ಕಂಡುಬಂದಿದೆ.</p>.<p>ಮತ್ತೊಂದು ವಿಡಿಯೊಲ್ಲಿ, ಯುವಕನೊಬ್ಬ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಬಹುಶಃ ಈ ಗುಂಡೇಟಿನಿಂದಲೇ ಚಂದನ್ ಗುಪ್ತಾ ಮೃತಪಟ್ಟಿರಬಹುದು ಎಂದು ಕೆಲವು ಮೂಲಗಳು ಅನುಮಾನ ವ್ಯಕ್ತಪಡಿಸಿವೆ. ಲಾಠಿ ಮತ್ತು ದೊಣ್ಣೆ ಬೀಸುತ್ತಾ ಬಂದ ಯುವಕರು ನಂತರ ಬಸ್ಸು, ಕಾರು, ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಸಮೀಪದ ಕಟ್ಟಡವೊಂದರ ಮೇಲಿನಿಂದ ವಿಡಿಯೊ ಚಿತ್ರೀಕರಿಸಲಾಗಿದೆ.</p>.<p>ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಈವರೆಗೆ ಸುಮಾರು 100 ಮಂದಿಯನ್ನು ಬಂಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>