ವಿವಿಧ ಪಕ್ಷಗಳ ಪ್ರಮುಖರಾದ ಜಸ್ವಂತ್ ಸಿಂಗ್ (ಬಾರ್ಮೇರ್), ಸಚಿನ್ ಪೈಲಟ್ (ಅಜ್ಮೀರ್), ಅಶೋಕ್ ಚೌಹಾಣ್ (ನಾಂದೇಡ್), ಲಾಲು ಪ್ರಸಾದ್ ಪುತ್ರಿ ಮಿಶಾ ಭಾರ್ತಿ (ಪಾಟಲೀಪುತ್ರ), ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ (ಬಾರಾಮತಿ), ಗುಲಾಂ ನಬಿ ಆಜಾದ್ (ಉಧಮ್ಪುರ), ಮೇನಕಾ ಗಾಂಧಿ (ಪಿಲಿಭೀತ್), ಶತ್ರುಘ್ನ ಸಿನ್ಹಾ (ಪಟ್ನಾ ಸಾಹೀಬ್), ಸುಶೀಲಕುಮಾರ್ ಶಿಂಧೆ (ಸೊಲ್ಲಾಪುರ) ಮತ್ತಿತರ ಗಣ್ಯರ ಭವಿಷ್ಯ ಈಗ ಮತಪೆಟ್ಟಿಗೆಗಳಲ್ಲಿ ಭದ್ರವಾಗಿ ಕೂತಿದ್ದು ಮೇ 16 ರಂದು ಬಹಿರಂಗವಾಗಲಿದೆ.
7 ಕಡೆ ಮತದಾರರೇ ಬರಲಿಲ್ಲ: ಒಡಿಶಾದ ಮಲ್ಕನ್ಗಿರಿ ಜಿಲ್ಲೆಯ 7 ಮತಗಟ್ಟೆಗಳಲ್ಲಿ ಒಬ್ಬರೂ ಮತದಾನ ಮಾಡಲಿಲ್ಲ.
ನಕ್ಸಲ್ಪೀಡಿತ ಈ ಭಾಗದಲ್ಲಿ ಭಯಗ್ರಸ್ಥ ಸ್ಥಿತಿ ಇದ್ದು ಬಹುಶಃ ಇದೇ ಕಾರಣದಿಂದ ಮತದಾರರು ಮತಗಟ್ಟೆಗೆ ಬಂದಿಲ್ಲ ಎನ್ನಲಾಗಿದೆ.