ಸೇತುವೆ ಕೆಡುವುತ್ತಿರುವುದರ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದಾಗ, ಸರ್ಕಾರದ ಸೂಚನೆಯಂತೇ ಈ ಕೆಲಸ ಮಾಡುತ್ತಿರುವುದಾಗಿ ಅರವಿಂದ ಕುಮಾರ್ ಮತ್ತು ಇತರರು ಸುಳ್ಳು ಹೇಳಿದ್ದರು. ಉಕ್ಕಿನ ಸೇತುವೆ ಬಳಕೆ ನಿಂತುಹೋಗಿದ್ದರಿಂದ ಗ್ರಾಮಸ್ಥರೂ ಕೂಡ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಸದ್ಯ ಅರವಿಂದ ಕುಮಾರ್ನನ್ನು ಸೆರೆ ಹಿಡಿದಿದ್ದೇವೆ. ಈ ಭಾಗದ ಎಸ್ಡಿಒ, ರಾಧೆ ಶ್ಯಾಮ್ ಸಿಂಗ್ ದರೋಡೆಯ ಮಾಸ್ಟರ್ ಮೈಂಡ್ ಎಂಬುದು ಗೊತ್ತಾಗಿದೆ. ಎಸ್ಡಿಒ ಮತ್ತು ಆತನ ಇತರ ಆರು ಸಹಚರರನ್ನು ಬಂಧಿಸಲಾಗಿದೆ’ ಎಂದು ಅವರು ಹೇಳಿದರು.