<p><strong>ಹೈದರಾಬಾದ್:</strong> ಛತ್ತೀಸಗಢದಲ್ಲಿ ಸಕ್ರಿಯರಾಗಿದ್ದ 20 ಮಹಿಳೆಯರು ಸೇರಿದಂತೆ 86 ನಕ್ಸಲರು, ತೆಲಂಗಾಣದ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯಲ್ಲಿ ಶನಿವಾರ ಪೊಲೀಸರಿಗೆ ಶರಣಾಗಿದ್ದಾರೆ.</p><p>ಹಿಂಸಾತ್ಮಕ ಮಾರ್ಗ ತ್ಯಜಿಸಿ, ತಮ್ಮ ಕುಟುಂಬಗಳೊಂದಿಗೆ ಶಾಂತಿಯುತ ಜೀವನ ನಡೆಸಲು ಐಜಿಪಿ ಎಸ್. ಚಂದ್ರಶೇಖರ ರೆಡ್ಡಿ ಮುಂದೆ ನಕ್ಸಲರು ಶರಣಾಗಿದ್ದಾರೆ.</p><p>ಶರಣಾದವರಲ್ಲಿ ತಲಾ ನಾಲ್ವರು ಸಹಾಯಕ ಕಮಾಂಡರ್ ಕೇಡರ್ನವರು ಹಾಗೂ ನಿಷೇಧಿತ ಸಿಪಿಐ ಸದಸ್ಯರು. ಉಳಿದವರು ವಿವಿಧ ಸೇನಾದಳದ ಸದಸ್ಯರು. 81 ಮಂದಿ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯವರಾಗಿದ್ದರೆ, ಉಳಿದ ಐವರು ಮುಲುಗು ಜಿಲ್ಲೆಯವರು.</p><p>ಶರಣಾಗತರಾದ ನಾಲ್ವರು ಸಿಪಿಐ ಸದಸ್ಯರ ಸುಳಿವಿಗೆ ತಲಾ ₹4 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಭದ್ರಾದ್ರಿ ಕೊತ್ತಗೂಡೆಂ ಪೊಲೀಸ್ ವರಿಷ್ಠಾಧಿಕಾರಿ ಬಿ. ರೋಹಿತ್ ರಾಜು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p><p>ಪ್ರಸಕ್ತ ವರ್ಷ ಇಲ್ಲಿಯವರೆಗೂ 224 ನಕ್ಸಲರು ಶರಣಾಗಿದ್ದಾರೆ ಎಂದು ಹೇಳಿದ್ದಾರೆ.</p>.ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 12 ರಿಂದ 6ಕ್ಕೆ ಇಳಿಕೆ: ಅಮಿತ್ ಶಾ .ನಕ್ಸಲ್ ಮುಕ್ತ ಕರ್ನಾಟಕ, ನಕ್ಸಲ್ ನಿಗ್ರಹ ಪಡೆ ವಿಸರ್ಜನೆ: ಸಿಎಂ ಘೋಷಣೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಛತ್ತೀಸಗಢದಲ್ಲಿ ಸಕ್ರಿಯರಾಗಿದ್ದ 20 ಮಹಿಳೆಯರು ಸೇರಿದಂತೆ 86 ನಕ್ಸಲರು, ತೆಲಂಗಾಣದ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯಲ್ಲಿ ಶನಿವಾರ ಪೊಲೀಸರಿಗೆ ಶರಣಾಗಿದ್ದಾರೆ.</p><p>ಹಿಂಸಾತ್ಮಕ ಮಾರ್ಗ ತ್ಯಜಿಸಿ, ತಮ್ಮ ಕುಟುಂಬಗಳೊಂದಿಗೆ ಶಾಂತಿಯುತ ಜೀವನ ನಡೆಸಲು ಐಜಿಪಿ ಎಸ್. ಚಂದ್ರಶೇಖರ ರೆಡ್ಡಿ ಮುಂದೆ ನಕ್ಸಲರು ಶರಣಾಗಿದ್ದಾರೆ.</p><p>ಶರಣಾದವರಲ್ಲಿ ತಲಾ ನಾಲ್ವರು ಸಹಾಯಕ ಕಮಾಂಡರ್ ಕೇಡರ್ನವರು ಹಾಗೂ ನಿಷೇಧಿತ ಸಿಪಿಐ ಸದಸ್ಯರು. ಉಳಿದವರು ವಿವಿಧ ಸೇನಾದಳದ ಸದಸ್ಯರು. 81 ಮಂದಿ ಭದ್ರಾದ್ರಿ ಕೊತ್ತಗೂಡೆಂ ಜಿಲ್ಲೆಯವರಾಗಿದ್ದರೆ, ಉಳಿದ ಐವರು ಮುಲುಗು ಜಿಲ್ಲೆಯವರು.</p><p>ಶರಣಾಗತರಾದ ನಾಲ್ವರು ಸಿಪಿಐ ಸದಸ್ಯರ ಸುಳಿವಿಗೆ ತಲಾ ₹4 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಭದ್ರಾದ್ರಿ ಕೊತ್ತಗೂಡೆಂ ಪೊಲೀಸ್ ವರಿಷ್ಠಾಧಿಕಾರಿ ಬಿ. ರೋಹಿತ್ ರಾಜು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p><p>ಪ್ರಸಕ್ತ ವರ್ಷ ಇಲ್ಲಿಯವರೆಗೂ 224 ನಕ್ಸಲರು ಶರಣಾಗಿದ್ದಾರೆ ಎಂದು ಹೇಳಿದ್ದಾರೆ.</p>.ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 12 ರಿಂದ 6ಕ್ಕೆ ಇಳಿಕೆ: ಅಮಿತ್ ಶಾ .ನಕ್ಸಲ್ ಮುಕ್ತ ಕರ್ನಾಟಕ, ನಕ್ಸಲ್ ನಿಗ್ರಹ ಪಡೆ ವಿಸರ್ಜನೆ: ಸಿಎಂ ಘೋಷಣೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>