<p><strong>ತಿರುವನಂತಪುರ</strong>: ತನ್ನ ವಿರುದ್ಧ ಅಕ್ರಮ ಸಂಬಂಧದ ಆರೋಪ ಹೊರೆಸಿದ್ದಕ್ಕೆ ಕೋಪಗೊಂಡು, 88ರ ವಯಸ್ಸಿನ ಪತ್ನಿಗೆ ಚಾಕುವಿನಿಂದ ಇರಿದಿದ್ದ 91 ವರ್ಷದ ವೃದ್ಧನಿಗೆ ಕೇರಳ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.</p>.<p>ಕೇರಳದ ಕೊಚ್ಚಿ ಮೂಲದ ಥೀವನ್ (91) ಅನ್ಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಅವರ ಪತ್ನಿ ಕುಂಜಲಿ (88) ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ದಂಪತಿ ನಡುವೆ ಸಂಘರ್ಷ ಉಂಟಾಗಿ ಮಾ.21ರಂದು ಕುಂಜಲಿಗೆ ಪತಿ ಚಾಕುವಿನಿಂದ ಇರಿದಿದ್ದರು. ಅಂದೇ ಅವರನ್ನು ಬಂಧಿಸಲಾಗಿತ್ತು. </p>.<p>ಜಾಮೀನು ಕೋರಿ ಥೀವನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ.ಕುನ್ಹಿಕೃಷ್ಣನ್ ಅವರು, ಷರತ್ತು ಬದ್ಧ ಜಾಮೀನು ನೀಡಿದ್ದಾರೆ. ತದ್ವಿರುದ್ಧ ಗುಣವಿರುವ ದಂಪತಿ ಒಬ್ಬರ ನಿಲುವನ್ನು ಮತ್ತೊಬ್ಬರು ಅರಿತು, ಅವುಗಳನ್ನು ಗೌರವಿಸುತ್ತಾ ಜೊತೆಗೆ ಸಾಗುವುದೇ ಸುಖ ದಾಂಪತ್ಯ ಎಂದೂ ನ್ಯಾಯಾಲಯ ಹೇಳಿದೆ. </p>.<p>91ರ ಇಳಿ ವಯಸ್ಸಿನಲ್ಲಿ ತನಗಿರುವ ಏಕೈಕ ಶಕ್ತಿ ಕುಂಜಲಿ ಎಂಬುದನ್ನು ಥೀವನ್ ತಿಳಿದುಕೊಳ್ಳಬೇಕು. ಕುಂಜಲಿ ಕೂಡ ವೃದ್ಧಾಪ್ಯದಲ್ಲಿ ತನಗಿರುವ ಆಧಾರ ಥೀವನ್ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಅವರು ಇದೇ ವೇಳೆ ಕಿವಿ ಮಾತು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ</strong>: ತನ್ನ ವಿರುದ್ಧ ಅಕ್ರಮ ಸಂಬಂಧದ ಆರೋಪ ಹೊರೆಸಿದ್ದಕ್ಕೆ ಕೋಪಗೊಂಡು, 88ರ ವಯಸ್ಸಿನ ಪತ್ನಿಗೆ ಚಾಕುವಿನಿಂದ ಇರಿದಿದ್ದ 91 ವರ್ಷದ ವೃದ್ಧನಿಗೆ ಕೇರಳ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.</p>.<p>ಕೇರಳದ ಕೊಚ್ಚಿ ಮೂಲದ ಥೀವನ್ (91) ಅನ್ಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಅವರ ಪತ್ನಿ ಕುಂಜಲಿ (88) ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ದಂಪತಿ ನಡುವೆ ಸಂಘರ್ಷ ಉಂಟಾಗಿ ಮಾ.21ರಂದು ಕುಂಜಲಿಗೆ ಪತಿ ಚಾಕುವಿನಿಂದ ಇರಿದಿದ್ದರು. ಅಂದೇ ಅವರನ್ನು ಬಂಧಿಸಲಾಗಿತ್ತು. </p>.<p>ಜಾಮೀನು ಕೋರಿ ಥೀವನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ.ಕುನ್ಹಿಕೃಷ್ಣನ್ ಅವರು, ಷರತ್ತು ಬದ್ಧ ಜಾಮೀನು ನೀಡಿದ್ದಾರೆ. ತದ್ವಿರುದ್ಧ ಗುಣವಿರುವ ದಂಪತಿ ಒಬ್ಬರ ನಿಲುವನ್ನು ಮತ್ತೊಬ್ಬರು ಅರಿತು, ಅವುಗಳನ್ನು ಗೌರವಿಸುತ್ತಾ ಜೊತೆಗೆ ಸಾಗುವುದೇ ಸುಖ ದಾಂಪತ್ಯ ಎಂದೂ ನ್ಯಾಯಾಲಯ ಹೇಳಿದೆ. </p>.<p>91ರ ಇಳಿ ವಯಸ್ಸಿನಲ್ಲಿ ತನಗಿರುವ ಏಕೈಕ ಶಕ್ತಿ ಕುಂಜಲಿ ಎಂಬುದನ್ನು ಥೀವನ್ ತಿಳಿದುಕೊಳ್ಳಬೇಕು. ಕುಂಜಲಿ ಕೂಡ ವೃದ್ಧಾಪ್ಯದಲ್ಲಿ ತನಗಿರುವ ಆಧಾರ ಥೀವನ್ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಅವರು ಇದೇ ವೇಳೆ ಕಿವಿ ಮಾತು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>