ಈ ಕ್ರಮವು ‘ರಾಜಕೀಯ ಪ್ರೇರಿತ’ ಎಂದು ಕೇಂದ್ರದ ವಿರುದ್ಧ ಕೇರಳ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. ‘ರಕ್ಷಣಾ ಇಲಾಖೆ ರಾಜ್ಯದ ಪ್ರಸ್ತಾವನೆಯನ್ನು ಮೂರನೇ ಬಾರಿ ಪರಿಶೀಲನೆ ನಡೆಸುವಾಗ ತಿರಸ್ಕರಿಸಿದೆ. ಹಿನ್ನೀರು, ಕಥಕ್ಕಳಿ, ಬೋಟ್ ಮುಂತಾದ ವಿಷಯವಿರಿಸಿಕೊಂಡು ಅದ್ಭುತವಾದ ಸ್ತಬ್ಧಚಿತ್ರದ ಪ್ರಸ್ತಾವನೆಯನ್ನು ನಾವು ನೀಡಿದ್ದೆವು. ಆದರೆ ಕೇರಳದ ಬಗ್ಗೆ ಏಕಿಷ್ಟು ದ್ವೇಷ ಎನ್ನುವುದು ತಿಳಿದಿಲ್ಲ. ಪದ್ಮ ಪ್ರಶಸ್ತಿ ಸಂದರ್ಭದಲ್ಲೂ ಕೇರಳದ ಶಿಫಾರಸನ್ನು ಕೇಂದ್ರ ತಿರಸ್ಕರಿಸಿತ್ತು’ ಎಂದು ಸಂಸ್ಕೃತಿ ಸಚಿವ ಎ.ಕೆ.ಬಾಲನ್ ಹೇಳಿದರು.