<p><strong>ಅಮರಾವತಿ</strong>: ರೈತರ ಸಂಪೂರ್ಣ ಸಾಲಮನ್ನಾ ಹಾಗೂ ಅಂಗವಿಕಲರ ಗೌರವಧನವನ್ನು ಏರಿಕೆ ಮಾಡುವಂತೆ ಒತ್ತಾಯಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಹಾರ್ ಜನಶಕ್ತಿಯ ಪಕ್ಷದ ಸಂಸ್ಥಾಪಕ ಬಚ್ಚು ಕಡೂ ಅವರು ಸರ್ಕಾರದ ಭರವಸೆ ಬಳಿಕ ಶನಿವಾರ ಹೋರಾಟ ಕೈ ಬಿಟ್ಟಿದ್ದಾರೆ.</p>.<p>ಕಡೂ ಅವರ 7 ದಿನಗಳಿಂದ ತಿವಾಸ ತಾಲ್ಲೂಕಿನ ಗುರುಕುಂಜ್ ಮೊಜಾರಿ ಪ್ರದೇಶದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಹೋರಾಟಕ್ಕೆ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದವು.</p>.<p class="title">ಇದರ ಬೆನ್ನಲ್ಲೇ ಸಚಿವ ಉದಯ್ ಸಾಮಂತ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಭರವಸೆ ಈಡೇರಿಸುವ ವಾಗ್ದಾನ ನೀಡಿದರು.</p>.<p class="title">‘ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ 15 ದಿನಗಳ ಒಳಗಾಗಿ ಉನ್ನತ ಮಟ್ಟದ ಸಮಿತಿ ರಚನೆ ಮಾಡುವುದಾಗಿ ಕಂದಾಯ ಸಚಿವ ಚಂದ್ರಶೇಖರ್ ಬಾವಂಕುಲೆ ತಿಳಿಸಿದ ಪತ್ರವನ್ನು ಬಚ್ಚು ಅವರಿಗೆ ಹಸ್ತಾಂತರಿಸಿದರು. ಅಂಗವಿಕಲರ ಗೌರವ ಧನವನ್ನು ₹6 ಸಾವಿರ ಏರಿಸುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದ ಬಳಿಕ ಉಪವಾಸ ಕೈಬಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮರಾವತಿ</strong>: ರೈತರ ಸಂಪೂರ್ಣ ಸಾಲಮನ್ನಾ ಹಾಗೂ ಅಂಗವಿಕಲರ ಗೌರವಧನವನ್ನು ಏರಿಕೆ ಮಾಡುವಂತೆ ಒತ್ತಾಯಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಹಾರ್ ಜನಶಕ್ತಿಯ ಪಕ್ಷದ ಸಂಸ್ಥಾಪಕ ಬಚ್ಚು ಕಡೂ ಅವರು ಸರ್ಕಾರದ ಭರವಸೆ ಬಳಿಕ ಶನಿವಾರ ಹೋರಾಟ ಕೈ ಬಿಟ್ಟಿದ್ದಾರೆ.</p>.<p>ಕಡೂ ಅವರ 7 ದಿನಗಳಿಂದ ತಿವಾಸ ತಾಲ್ಲೂಕಿನ ಗುರುಕುಂಜ್ ಮೊಜಾರಿ ಪ್ರದೇಶದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಹೋರಾಟಕ್ಕೆ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದವು.</p>.<p class="title">ಇದರ ಬೆನ್ನಲ್ಲೇ ಸಚಿವ ಉದಯ್ ಸಾಮಂತ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಭರವಸೆ ಈಡೇರಿಸುವ ವಾಗ್ದಾನ ನೀಡಿದರು.</p>.<p class="title">‘ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ 15 ದಿನಗಳ ಒಳಗಾಗಿ ಉನ್ನತ ಮಟ್ಟದ ಸಮಿತಿ ರಚನೆ ಮಾಡುವುದಾಗಿ ಕಂದಾಯ ಸಚಿವ ಚಂದ್ರಶೇಖರ್ ಬಾವಂಕುಲೆ ತಿಳಿಸಿದ ಪತ್ರವನ್ನು ಬಚ್ಚು ಅವರಿಗೆ ಹಸ್ತಾಂತರಿಸಿದರು. ಅಂಗವಿಕಲರ ಗೌರವ ಧನವನ್ನು ₹6 ಸಾವಿರ ಏರಿಸುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದ ಬಳಿಕ ಉಪವಾಸ ಕೈಬಿಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>