<p><strong>ನವದೆಹಲಿ:</strong> ತಾವು ಪ್ರಯಾಣಿಸುತ್ತಿದ್ದ ತಿರುವನಂತಪುರ–ದೆಹಲಿ ವಿಮಾನದ ಮಾರ್ಗ ಬದಲಾಯಿಸಿ, ಚೆನ್ನೈಗೆ ಕರೆದೊಯ್ಯಲಾಯಿತು. ಈ ಮೂಲಕ ಏರ್ ಇಂಡಿಯಾದಿಂದ ತಮ್ಮ ಹಕ್ಕುಚ್ಯುತಿಯಾಗಿದೆ ಎಂದು ಕಾಂಗ್ರೆಸ್ನ ಕೆ.ಸಿ.ವೇಣುಗೋಪಾಲ್ ಸೇರಿ ಐವರು ಸಂಸದರು ಮಂಗಳವಾರ ದೂರಿದ್ದಾರೆ.</p>.<p>ಈ ಕುರಿತು ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ನೋಟಿಸ್ ಸಲ್ಲಿಸಿದ್ದಾರೆ.</p>.<p>ವೇಣುಗೋಪಾಲ್ ಅವರಲ್ಲದೇ, ಕಾಂಗ್ರೆಸ್ನ ಕೆ.ಸುರೇಶ್, ಅಡೂರ್ ಪ್ರಕಾಶ್, ರಾಬರ್ಟ್ ಬ್ರೂಸ್ ಹಾಗೂ ಸಿಪಿಎಂನ ಕೆ.ರಾಧಾಕೃಷ್ಣನ್ ಅವರು ಆಗಸ್ಟ್ 10ರಂದು ಏರ್ ಇಂಡಿಯಾ ವಿಮಾನದಲ್ಲಿ (ಎಐ 2455) ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.</p>.<p>ವಿಮಾನದ ಮಾರ್ಗ ಬದಲಿಸಿದ್ದರ ಕುರಿತು ಈ ಸಂಸದರು, ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೂ ಪತ್ರ ಬರೆದಿದ್ದು, ಘಟನೆ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.</p>.<p>‘ಆಗಸ್ಟ್ 10ರಂದು ರಾತ್ರಿ 7.15ಕ್ಕೆ ತಿರುವನಂತಪುರದಿಂದ ವಿಮಾನ ಹೊರಡಬೇಕಿತ್ತು. ಆದರೆ, ರಾತ್ರಿ 8.30ಕ್ಕೆ ಹೊರಟಿತು. ಪ್ರಯಾಣದ ವೇಳೆ ವಿಮಾನವು ಭಾರಿ ಪ್ರಕ್ಷುಬ್ಧತೆಗೆ ಒಳಗಾಯಿತು’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.</p>.<p>‘ಊಟ ಸೇರಿ ವಿವಿಧ ಸೌಲಭ್ಯಗಳು ಕೂಡ ವಿಮಾನದಲ್ಲಿ ಇರಲಿಲ್ಲ. ಹಾರಾಟದ ಮಧ್ಯೆ, ತಾಂತ್ರಿಕ ಸಮಸ್ಯೆ ಕಂಡುಬಂದಿರುವ ಕಾರಣ ವಿಮಾನದ ಮಾರ್ಗ ಬದಲಿಸಿ, ಚೆನ್ನೈಗೆ ಒಯ್ಯಲಾಗುವುದು ಎಂಬುದಾಗಿ ಪೈಲಟ್ ಘೋಷಿಸಿದ್ದರು’ ಎಂದೂ ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ತಾವು ಪ್ರಯಾಣಿಸುತ್ತಿದ್ದ ತಿರುವನಂತಪುರ–ದೆಹಲಿ ವಿಮಾನದ ಮಾರ್ಗ ಬದಲಾಯಿಸಿ, ಚೆನ್ನೈಗೆ ಕರೆದೊಯ್ಯಲಾಯಿತು. ಈ ಮೂಲಕ ಏರ್ ಇಂಡಿಯಾದಿಂದ ತಮ್ಮ ಹಕ್ಕುಚ್ಯುತಿಯಾಗಿದೆ ಎಂದು ಕಾಂಗ್ರೆಸ್ನ ಕೆ.ಸಿ.ವೇಣುಗೋಪಾಲ್ ಸೇರಿ ಐವರು ಸಂಸದರು ಮಂಗಳವಾರ ದೂರಿದ್ದಾರೆ.</p>.<p>ಈ ಕುರಿತು ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ನೋಟಿಸ್ ಸಲ್ಲಿಸಿದ್ದಾರೆ.</p>.<p>ವೇಣುಗೋಪಾಲ್ ಅವರಲ್ಲದೇ, ಕಾಂಗ್ರೆಸ್ನ ಕೆ.ಸುರೇಶ್, ಅಡೂರ್ ಪ್ರಕಾಶ್, ರಾಬರ್ಟ್ ಬ್ರೂಸ್ ಹಾಗೂ ಸಿಪಿಎಂನ ಕೆ.ರಾಧಾಕೃಷ್ಣನ್ ಅವರು ಆಗಸ್ಟ್ 10ರಂದು ಏರ್ ಇಂಡಿಯಾ ವಿಮಾನದಲ್ಲಿ (ಎಐ 2455) ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.</p>.<p>ವಿಮಾನದ ಮಾರ್ಗ ಬದಲಿಸಿದ್ದರ ಕುರಿತು ಈ ಸಂಸದರು, ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೂ ಪತ್ರ ಬರೆದಿದ್ದು, ಘಟನೆ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.</p>.<p>‘ಆಗಸ್ಟ್ 10ರಂದು ರಾತ್ರಿ 7.15ಕ್ಕೆ ತಿರುವನಂತಪುರದಿಂದ ವಿಮಾನ ಹೊರಡಬೇಕಿತ್ತು. ಆದರೆ, ರಾತ್ರಿ 8.30ಕ್ಕೆ ಹೊರಟಿತು. ಪ್ರಯಾಣದ ವೇಳೆ ವಿಮಾನವು ಭಾರಿ ಪ್ರಕ್ಷುಬ್ಧತೆಗೆ ಒಳಗಾಯಿತು’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.</p>.<p>‘ಊಟ ಸೇರಿ ವಿವಿಧ ಸೌಲಭ್ಯಗಳು ಕೂಡ ವಿಮಾನದಲ್ಲಿ ಇರಲಿಲ್ಲ. ಹಾರಾಟದ ಮಧ್ಯೆ, ತಾಂತ್ರಿಕ ಸಮಸ್ಯೆ ಕಂಡುಬಂದಿರುವ ಕಾರಣ ವಿಮಾನದ ಮಾರ್ಗ ಬದಲಿಸಿ, ಚೆನ್ನೈಗೆ ಒಯ್ಯಲಾಗುವುದು ಎಂಬುದಾಗಿ ಪೈಲಟ್ ಘೋಷಿಸಿದ್ದರು’ ಎಂದೂ ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>