ದೂರವಾಣಿ ಸಂಭಾಷಣೆ ಕುರಿತು ಪ್ರತಿಕ್ರಿಯಿಸಿರುವ ಪಕ್ಷದ ಮುಖಂಡ ಮುನುಸಾಮಿ ಅವರು, ‘ಶಶಿಕಲಾಗೂ, ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಪಕ್ಷವು ಅಭಿವೃದ್ಧಿ ಹೊಂದುತ್ತಿದ್ದು, ಇಂಥ ಸಮಯದಲ್ಲಿ ಹೇಗಾದರೂ ಗೊಂದಲ ಸೃಷ್ಟಿಸಲು ಶಶಿಕಲಾ ಅವರು ಇತರರ ಮೂಲಕ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಈ ಮೂಲಕ ಪಕ್ಷದ ಕಾರ್ಯಕರ್ತರ ಗಮನವನ್ನು ಬೇರೆಡೆಗೆ ತಿರುಗಿಸಿ, ಗೊಂದಲ ಸೃಷ್ಟಿಸುವುದೇ ಅವರ ಉದ್ದೇಶವಾಗಿದೆ. ಆದರೆ,ಈ ಪ್ರಯತ್ನವು ಯಶಸ್ವಿಯಾಗುವುದಿಲ್ಲ. ಪಕ್ಷದ ಸ್ಥಾಪಕ ಎಂ.ಜಿ. ರಾಮಚಂದ್ರನ್ ಅವರ ಕಾಲದಿಂದಲೇ ಪಕ್ಷದ ಶಕ್ತಿಯಾಗಿರುವವರು ಅಸಂಖ್ಯಾತ ಕಾರ್ಯಕರ್ತರೇ ಹೊರತು ಶಶಿಕಲಾ ಅವರಲ್ಲ’ ಎಂದು ತಿಳಿಸಿದ್ದಾರೆ.