ಚೆನ್ನೈ: ವಿರೋಧ ಪಕ್ಷಗಳಿಗಿಂತ ಪ್ರಧಾನಿ ನರೇಂದ್ರ ಮೋದಿ ಅವರೇ ಬಲಿಷ್ಠರು ಎಂದು ಖ್ಯಾತ ನಟ ರಜನಿಕಾಂತ್ ನೀಡಿರುವ ಹೇಳಿಕೆಯನ್ನು ಎಐಎಡಿಎಂಕೆ ಟೀಕಿಸಿದೆ.
‘ಯಾರು ಬಲಿಷ್ಠರು ಮತ್ತು ಯಾರು ದುರ್ಬಲರು ಎನ್ನುವುದನ್ನು ಚುನಾವಣೆಯಲ್ಲಿ ಜನರೇ ನಿರ್ಧರಿಸುತ್ತಾರೆ. ಪ್ರತಿಯೊಬ್ಬ ಅಭ್ಯರ್ಥಿಯ ಬಗ್ಗೆ ಮತದಾರರು ಪರಾಮರ್ಶೆ ನಡೆಸುತ್ತಾರೆ’ ಎಂದು ಎಐಎಡಿಎಂಕೆ ಹಿರಿಯ ಸಚಿವ ಡಿ.ಜಯಕುಮಾರ್ ತಿಳಿಸಿದ್ದಾರೆ.
‘ನಮ್ಮ ಮಕ್ಕಳೇ ಶ್ರೇಷ್ಠರು ಎಂದು ಪೋಷಕರು ಹೇಳಿಕೊಳ್ಳುತ್ತಾರೆ. ಆದರೆ, ಶಿಕ್ಷಕರು ಅವರ ಚಟುವಟಿಕೆಗಳನ್ನು ಪರಿಶೀಲನೆ ಮಾಡುತ್ತಾರೆ. ಚುನಾವಣೆಯಲ್ಲಿ ಮತದಾರರು ಶಿಕ್ಷಕರಿದ್ದಂತೆ’ ಎಂದು ಹೇಳಿದ್ದಾರೆ. ‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಸಂಸದರ ಸಾಧನೆ ಪರಾಮರ್ಶೆಯಾಗಲಿದೆ’ ಎಂದರು.