ಹೈದರಾಬಾದ್: 1948ರಲ್ಲಿ ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಸಂಸ್ಥಾನವನ್ನು, ಭಾರತದ ಒಕ್ಕೂಟದೊಂದಿಗೆ ವಿಲೀನ ಮಾಡಿದ ದಿನ ಸೆ.17 ಅನ್ನು ರಾಷ್ಟ್ರೀಯ ಏಕೀಕರಣ ದಿನವನ್ನಾಗಿ ಆಚರಿಸಲು ಎಐಎಂಐಎಂ ಪಕ್ಷ ನಿರ್ಧರಿಸಿದೆ.
ಇದರ ಅಂಗವಾಗಿ ಬೈಕ್ ರ್ಯಾಲಿ, ಸಾರ್ವಜನಿಕ ಸಭೆಯನ್ನು ಆಯೋಜಿಸಿದ್ದು, ಅಧ್ಯಕ್ಷ ಅಸಾದುದ್ದೀನ್ ಓವೈಸಿ, ತೆಲಂಗಾಣ ವಿಧಾನಸಭೆಯಲ್ಲಿ ಪಕ್ಷದ ನಾಯಕರಾಗಿರುವ ಅಕ್ಬರುದ್ದೀನ್ ಓವೈಸಿ, ಶಾಸಕರು, ಕಾರ್ಪೊರೇಟರ್ಗಳು ಭಾಗವಹಿಸುವರು ಎಂದು ಸೋಮವಾರ ತಿಳಿಸಿದೆ.
ಹಿಂದಿನ ವರ್ಷ ತೆಲಂಗಾಣ ಸರ್ಕಾರ ರಾಷ್ಟ್ರೀಯ ಏಕೀಕರಣ ದಿನವನ್ನು ಮೂರು ದಿನ ಆಯೋಜಿಸಿದ್ದರೆ, ಕೇಂದ್ರ ಸರ್ಕಾರ ತೆಲಂಗಾಣ ವಿಮೋಚನಾ ದಿನ ಆಚರಿಸಿತ್ತು.