<p><strong>ನವದೆಹಲಿ: </strong>ದೇಶದ ರಾಜಧಾನಿಯಲ್ಲಿ ವಾಹನಗಳಿಂದ ಆಗುತ್ತಿರುವ ಮಾಲಿನ್ಯ ತಗ್ಗಿಸಲು ದೆಹಲಿ ಸರ್ಕಾರ 100 ಸಿಗ್ನಲ್ ಇರುವ ಸ್ಥಳಗಳಲ್ಲಿ ಎರಡನೇ ಹಂತದ ‘ರೆಡ್ ಲೈಟ್ ಆನ್, ಗಾಡಿ ಆಫ್’ (ಕೆಂಪುದೀಪ ಹೊತ್ತಿಕೊಂಡಾಗ, ವಾಹನ ಆಫ್ ಮಾಡಿ) ಅಭಿಯಾನ ಆರಂಭಿಸಿದೆ.</p>.<p>ದೆಹಲಿ ಸರ್ಕಾರದ ಪರಿಸರ ಸಚಿವ ಗೋಪಲ್ ರೈ ಅವರು ಶುಕ್ರವಾರ ಐಟಿಒ ಕ್ರಾಸಿಂಗ್ಗೆ ಭೇಟಿ ನೀಡಿ, ಅಭಿಯಾನವನ್ನು ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.</p>.<p>ಇದನ್ನೂ ಓದಿ:<a href="https://www.prajavani.net/india-news/farmers-protest-timeline-centre-to-repeal-farm-laws-after-a-year-delhi-border-885106.html" itemprop="url">Farm Laws Timeline | ಕೃಷಿ ಕಾಯ್ದೆ: ಇಲ್ಲಿದೆ ರೈತರ ಹೋರಾಟದ ಹಾದಿ... </a></p>.<p>ವಾಹನಗಳಿಂದ ಆಗುತ್ತಿರುವ ಮಾಲಿನ್ಯವನ್ನು ಅರಿತ ಸರ್ಕಾರ ಮೊದಲ ಹಂತವಾಗಿ ಅ.18ರಿಂದ ನ.18ರವರೆಗೆ ಈ ಅಭಿಯಾನ ಕೈಗೊಂಡಿತ್ತು. ಈಗ ಶುಕ್ರವಾರದಿಂದ ಎರಡನೇ ಹಂತದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು. </p>.<p>‘ದೆಹಲಿಯ ವಾಯು ಮಾಲಿನ್ಯಕ್ಕೆ ವಾಹನಗಳು ಹೊರಸೂಸುತ್ತಿರುವ ಹೊಗೆಯ ಕೊಡುಗೆಯೂ (ಶೇ 30) ಹೆಚ್ಚಿದೆ ಎಂಬುದನ್ನು ವಿವಿಧ ಸಂಶೋಧನೆಗಳು ತೋರಿಸಿವೆ’ ಎಂದು ರೈ ಹೇಳಿದರು.</p>.<p>‘ಸಾಮಾನ್ಯವಾಗಿ ವಾಹನ ಚಾಲಕರು ನಿತ್ಯ ಟ್ರಾಫಿಕ್ ಜಂಕ್ಷನ್ಗಳಲ್ಲಿ ಸರಾಸರಿ 20ರಿಂದ 25 ನಿಮಿಷ ಇಂಧನ ಸುಡುತ್ತಾರೆ. ಇದು ಇಂಧನ ವ್ಯರ್ಥ ಹಾಗೂ ಮಾಲಿನ್ಯಕ್ಕೆ ಮೂಲ ಕಾರಣ’ ಎಂದು ಅವರು ತಿಳಿಸಿದರು.</p>.<p>‘ರೆಡ್ಲೈಟ್ ಆನ್, ಗಾಡಿ ಆಫ್’ ಅಭಿಯಾನದ ಮೂಲ ಉದ್ದೇಶವೇ ನಗರದಲ್ಲಿ ವಾಹನಗಳಿಂದ ಉಂಟಾಗುವ ಮಾಲಿನ್ಯ ತಡೆಯುವುದಾಗಿದೆ. ಹೀಗಾಗಿ ನಾವು ಈ ಅಭಿಯಾನವನ್ನು ಇಂದಿನಿಂದ ಇನ್ನೂ 15 ದಿನಗಳ ಕಾಲ ಅಂದರೆ, ಡಿ.3ರವರೆಗೆ ಮುಂದುವರಿಸುತ್ತೇವೆ’ ಎಂದು ರೈ ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ದೇಶದ ರಾಜಧಾನಿಯಲ್ಲಿ ವಾಹನಗಳಿಂದ ಆಗುತ್ತಿರುವ ಮಾಲಿನ್ಯ ತಗ್ಗಿಸಲು ದೆಹಲಿ ಸರ್ಕಾರ 100 ಸಿಗ್ನಲ್ ಇರುವ ಸ್ಥಳಗಳಲ್ಲಿ ಎರಡನೇ ಹಂತದ ‘ರೆಡ್ ಲೈಟ್ ಆನ್, ಗಾಡಿ ಆಫ್’ (ಕೆಂಪುದೀಪ ಹೊತ್ತಿಕೊಂಡಾಗ, ವಾಹನ ಆಫ್ ಮಾಡಿ) ಅಭಿಯಾನ ಆರಂಭಿಸಿದೆ.</p>.<p>ದೆಹಲಿ ಸರ್ಕಾರದ ಪರಿಸರ ಸಚಿವ ಗೋಪಲ್ ರೈ ಅವರು ಶುಕ್ರವಾರ ಐಟಿಒ ಕ್ರಾಸಿಂಗ್ಗೆ ಭೇಟಿ ನೀಡಿ, ಅಭಿಯಾನವನ್ನು ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.</p>.<p>ಇದನ್ನೂ ಓದಿ:<a href="https://www.prajavani.net/india-news/farmers-protest-timeline-centre-to-repeal-farm-laws-after-a-year-delhi-border-885106.html" itemprop="url">Farm Laws Timeline | ಕೃಷಿ ಕಾಯ್ದೆ: ಇಲ್ಲಿದೆ ರೈತರ ಹೋರಾಟದ ಹಾದಿ... </a></p>.<p>ವಾಹನಗಳಿಂದ ಆಗುತ್ತಿರುವ ಮಾಲಿನ್ಯವನ್ನು ಅರಿತ ಸರ್ಕಾರ ಮೊದಲ ಹಂತವಾಗಿ ಅ.18ರಿಂದ ನ.18ರವರೆಗೆ ಈ ಅಭಿಯಾನ ಕೈಗೊಂಡಿತ್ತು. ಈಗ ಶುಕ್ರವಾರದಿಂದ ಎರಡನೇ ಹಂತದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು. </p>.<p>‘ದೆಹಲಿಯ ವಾಯು ಮಾಲಿನ್ಯಕ್ಕೆ ವಾಹನಗಳು ಹೊರಸೂಸುತ್ತಿರುವ ಹೊಗೆಯ ಕೊಡುಗೆಯೂ (ಶೇ 30) ಹೆಚ್ಚಿದೆ ಎಂಬುದನ್ನು ವಿವಿಧ ಸಂಶೋಧನೆಗಳು ತೋರಿಸಿವೆ’ ಎಂದು ರೈ ಹೇಳಿದರು.</p>.<p>‘ಸಾಮಾನ್ಯವಾಗಿ ವಾಹನ ಚಾಲಕರು ನಿತ್ಯ ಟ್ರಾಫಿಕ್ ಜಂಕ್ಷನ್ಗಳಲ್ಲಿ ಸರಾಸರಿ 20ರಿಂದ 25 ನಿಮಿಷ ಇಂಧನ ಸುಡುತ್ತಾರೆ. ಇದು ಇಂಧನ ವ್ಯರ್ಥ ಹಾಗೂ ಮಾಲಿನ್ಯಕ್ಕೆ ಮೂಲ ಕಾರಣ’ ಎಂದು ಅವರು ತಿಳಿಸಿದರು.</p>.<p>‘ರೆಡ್ಲೈಟ್ ಆನ್, ಗಾಡಿ ಆಫ್’ ಅಭಿಯಾನದ ಮೂಲ ಉದ್ದೇಶವೇ ನಗರದಲ್ಲಿ ವಾಹನಗಳಿಂದ ಉಂಟಾಗುವ ಮಾಲಿನ್ಯ ತಡೆಯುವುದಾಗಿದೆ. ಹೀಗಾಗಿ ನಾವು ಈ ಅಭಿಯಾನವನ್ನು ಇಂದಿನಿಂದ ಇನ್ನೂ 15 ದಿನಗಳ ಕಾಲ ಅಂದರೆ, ಡಿ.3ರವರೆಗೆ ಮುಂದುವರಿಸುತ್ತೇವೆ’ ಎಂದು ರೈ ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>