<p class="bodytext">ನವದೆಹಲಿ: ಸೌಹಾರ್ದ ಕಾಯ್ದುಕೊಳ್ಳುವುದು ಎಲ್ಲ ಸಮುದಾಯಗಳ ಹೊಣೆಗಾರಿಕೆಯಾಗಿದೆ. ದ್ವೇಷ ಭಾಷಣವನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದ್ವೇಷ ಭಾಷಣ ಪ್ರಕರಣಗಳ ತನಿಖೆಯ ಕಣ್ಗಾವಲಿಗೆ ಸಮಿತಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. </p>.<p class="bodytext">ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ.ಎನ್. ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠವು, ಈ ನಿಟ್ಟಿನಲ್ಲಿ ಅಗತ್ಯ ಸೂಚನೆಗಳನ್ನು ಪಡೆದು, ಸಮಿತಿಯನ್ನು ರಚಿಸುವ ಕುರಿತು ಆಗಸ್ಟ್ 18ರ ಒಳಗೆ ಮಾಹಿತಿಯನ್ನು ನೀಡುವಂತೆ ಕೇಂದ್ರವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರಿಗೆ ಸೂಚನೆ ನೀಡಿದೆ. </p>.<p>ಠಾಣಾಧಿಕಾರಿಗಳಿಂದ ದೂರುಗಳನ್ನು ಪಡೆದುಕೊಳ್ಳುವುದಕ್ಕಾಗಿ ಸಮಿತಿಯೊಂದನ್ನು ರಚಿಸುವಂತೆ ಡಿಜಿಪಿಯನ್ನು ಕೇಳಬಹುದು. ದ್ವೇಷ ಭಾಷಣದಲ್ಲಿ ಇದ್ದ ಅಂಶಗಳೇನು, ಭಾಷಣದ ಧ್ವನಿಮುದ್ರಿಕೆಯು ಅಸಲಿಯೇ ಎಂಬುದನ್ನು ಪರಿಶೀಲಿಸಿದ ಬಳಿಕ ಸೂಕ್ತ ನಿರ್ದೇಶನಗಳನ್ನು ಅಧಿಕಾರಿಗಳಿಗೆ ನೀಡಬಹುದು ಎಂದು ಕೋರ್ಟ್ ಹೇಳಿದೆ. </p>.<p>ವಿವಿಧ ಹಂತಗಳಲ್ಲಿ ಕಾನೂನಿನ ಗ್ರಹಿಕೆಯ ಸಮಸ್ಯೆ ಇದೆ. ಈ ಕುರಿತು ಜಾಗೃತಿಯ ಅಗತ್ಯಯವೂ ಇದೆ. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲೇಬೇಕಿದೆ ಮತ್ತು ದ್ವೇಷ ಭಾಷಣವು ಯಾರಿಗೂ ಒಪ್ಪಿತ ಅಲ್ಲವೇ ಅಲ್ಲ ಎಂದು ಪೀಠ ವಿವರಿಸಿದೆ. </p>.<p>ಕೆಲವು ಸ್ಥಳಗಳಲ್ಲಿ ಯಾವುದೋ ಕಾರಣಕ್ಕಾಗಿ ಕಾನೂನು ಪಾಲನೆ ಆಗುತ್ತಿಲ್ಲ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರು ಪೀಠಕ್ಕೆ ಹೇಳಿದರು. </p>.<p>‘ಸೂಕ್ತವಾದ ವ್ಯವಸ್ಥೆಯನ್ನು ಯಾಕೆ ಮಾಡಿಕೊಂಡಿಲ್ಲ’ ಎಂದು ನಟರಾಜ್ ಅವರನ್ನು ಪೀಠವು ಪ್ರಶ್ನಿಸಿದೆ. </p>.<p>ಎಲ್ಲದಕ್ಕೂ ನ್ಯಾಯಾಲಯಕ್ಕೆ ಬರುವುದು ಪರಿಹಾರ ಅಲ್ಲ. ದ್ವೇಷ ಭಾಷಣವನ್ನು ನಿರ್ವಹಿಸುವುದಕ್ಕೆ ವ್ಯವಸ್ಥೆಯೊಂದು ಬೇಕೇಬೇಕು ಎಂದು ಪೀಠವು ಹೇಳಿದೆ. </p>.<p>ಸರ್ಕಾರವು ದ್ವೇಷ ಭಾಷಣವನ್ನು ಬೆಂಬಲಿಸುವುದಿಲ್ಲ ಎಂಂದು ನಟರಾಜ್ ಅವರು ಹೇಳಿದರು. </p>.<p>ಹರಿಯಾಣದ ನೂಹ್ನಲ್ಲಿ ಕೋಮು ಸಂಘರ್ಷ ನಡೆಯುವುದಕ್ಕೆ ಮೊದಲು ಹಿಂಸೆಗೆ ಕುಮ್ಮಕ್ಕು ನೀಡುವ ರೀತಿಯಲ್ಲಿ ಭಾಷಣ ಮಾಡಲಾಗಿತ್ತು ಎಂದು ಅರ್ಜಿದಾರರಾದ ಪತ್ರಕರ್ತೆ ಶಾಹೀನ್ ಅಬ್ದುಲ್ಲಾ ಅವರ ವಕೀಲ ಕಪಿಲ್ ಸಿಬಲ್ ಹೇಳಿದರು. </p>.<p>ವಿಡಿಯೊ ಸೇರಿದಂತೆ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಡಿಜಿಪಿ ಅವರಿಗೆ ಕೊಡಬಹುದು. ಆದರೆ, ಎಫ್ಐಆರ್ ದಾಖಲಿಕೆ ಸಮಸ್ಯೆ ಅಲ್ಲ, ನಂತರದ ತನಿಖೆಯ ಪ್ರಗತಿಯೇ ಸಮಸ್ಯೆ ಎಂದು ಸಿಬಲ್ ಹೇಳಿದರು. ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲು ಪೀಠವು ಸಿಬಲ್ ಅವರಿಗೆ ಸೂಚಿಸಿತು.</p>.<p>ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ದ್ವೇಷ ಭಾಷಣಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="bodytext">ನವದೆಹಲಿ: ಸೌಹಾರ್ದ ಕಾಯ್ದುಕೊಳ್ಳುವುದು ಎಲ್ಲ ಸಮುದಾಯಗಳ ಹೊಣೆಗಾರಿಕೆಯಾಗಿದೆ. ದ್ವೇಷ ಭಾಷಣವನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದ್ವೇಷ ಭಾಷಣ ಪ್ರಕರಣಗಳ ತನಿಖೆಯ ಕಣ್ಗಾವಲಿಗೆ ಸಮಿತಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. </p>.<p class="bodytext">ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ.ಎನ್. ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠವು, ಈ ನಿಟ್ಟಿನಲ್ಲಿ ಅಗತ್ಯ ಸೂಚನೆಗಳನ್ನು ಪಡೆದು, ಸಮಿತಿಯನ್ನು ರಚಿಸುವ ಕುರಿತು ಆಗಸ್ಟ್ 18ರ ಒಳಗೆ ಮಾಹಿತಿಯನ್ನು ನೀಡುವಂತೆ ಕೇಂದ್ರವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರಿಗೆ ಸೂಚನೆ ನೀಡಿದೆ. </p>.<p>ಠಾಣಾಧಿಕಾರಿಗಳಿಂದ ದೂರುಗಳನ್ನು ಪಡೆದುಕೊಳ್ಳುವುದಕ್ಕಾಗಿ ಸಮಿತಿಯೊಂದನ್ನು ರಚಿಸುವಂತೆ ಡಿಜಿಪಿಯನ್ನು ಕೇಳಬಹುದು. ದ್ವೇಷ ಭಾಷಣದಲ್ಲಿ ಇದ್ದ ಅಂಶಗಳೇನು, ಭಾಷಣದ ಧ್ವನಿಮುದ್ರಿಕೆಯು ಅಸಲಿಯೇ ಎಂಬುದನ್ನು ಪರಿಶೀಲಿಸಿದ ಬಳಿಕ ಸೂಕ್ತ ನಿರ್ದೇಶನಗಳನ್ನು ಅಧಿಕಾರಿಗಳಿಗೆ ನೀಡಬಹುದು ಎಂದು ಕೋರ್ಟ್ ಹೇಳಿದೆ. </p>.<p>ವಿವಿಧ ಹಂತಗಳಲ್ಲಿ ಕಾನೂನಿನ ಗ್ರಹಿಕೆಯ ಸಮಸ್ಯೆ ಇದೆ. ಈ ಕುರಿತು ಜಾಗೃತಿಯ ಅಗತ್ಯಯವೂ ಇದೆ. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲೇಬೇಕಿದೆ ಮತ್ತು ದ್ವೇಷ ಭಾಷಣವು ಯಾರಿಗೂ ಒಪ್ಪಿತ ಅಲ್ಲವೇ ಅಲ್ಲ ಎಂದು ಪೀಠ ವಿವರಿಸಿದೆ. </p>.<p>ಕೆಲವು ಸ್ಥಳಗಳಲ್ಲಿ ಯಾವುದೋ ಕಾರಣಕ್ಕಾಗಿ ಕಾನೂನು ಪಾಲನೆ ಆಗುತ್ತಿಲ್ಲ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರು ಪೀಠಕ್ಕೆ ಹೇಳಿದರು. </p>.<p>‘ಸೂಕ್ತವಾದ ವ್ಯವಸ್ಥೆಯನ್ನು ಯಾಕೆ ಮಾಡಿಕೊಂಡಿಲ್ಲ’ ಎಂದು ನಟರಾಜ್ ಅವರನ್ನು ಪೀಠವು ಪ್ರಶ್ನಿಸಿದೆ. </p>.<p>ಎಲ್ಲದಕ್ಕೂ ನ್ಯಾಯಾಲಯಕ್ಕೆ ಬರುವುದು ಪರಿಹಾರ ಅಲ್ಲ. ದ್ವೇಷ ಭಾಷಣವನ್ನು ನಿರ್ವಹಿಸುವುದಕ್ಕೆ ವ್ಯವಸ್ಥೆಯೊಂದು ಬೇಕೇಬೇಕು ಎಂದು ಪೀಠವು ಹೇಳಿದೆ. </p>.<p>ಸರ್ಕಾರವು ದ್ವೇಷ ಭಾಷಣವನ್ನು ಬೆಂಬಲಿಸುವುದಿಲ್ಲ ಎಂಂದು ನಟರಾಜ್ ಅವರು ಹೇಳಿದರು. </p>.<p>ಹರಿಯಾಣದ ನೂಹ್ನಲ್ಲಿ ಕೋಮು ಸಂಘರ್ಷ ನಡೆಯುವುದಕ್ಕೆ ಮೊದಲು ಹಿಂಸೆಗೆ ಕುಮ್ಮಕ್ಕು ನೀಡುವ ರೀತಿಯಲ್ಲಿ ಭಾಷಣ ಮಾಡಲಾಗಿತ್ತು ಎಂದು ಅರ್ಜಿದಾರರಾದ ಪತ್ರಕರ್ತೆ ಶಾಹೀನ್ ಅಬ್ದುಲ್ಲಾ ಅವರ ವಕೀಲ ಕಪಿಲ್ ಸಿಬಲ್ ಹೇಳಿದರು. </p>.<p>ವಿಡಿಯೊ ಸೇರಿದಂತೆ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಡಿಜಿಪಿ ಅವರಿಗೆ ಕೊಡಬಹುದು. ಆದರೆ, ಎಫ್ಐಆರ್ ದಾಖಲಿಕೆ ಸಮಸ್ಯೆ ಅಲ್ಲ, ನಂತರದ ತನಿಖೆಯ ಪ್ರಗತಿಯೇ ಸಮಸ್ಯೆ ಎಂದು ಸಿಬಲ್ ಹೇಳಿದರು. ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲು ಪೀಠವು ಸಿಬಲ್ ಅವರಿಗೆ ಸೂಚಿಸಿತು.</p>.<p>ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ದ್ವೇಷ ಭಾಷಣಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>