ಹೈದರಾಬಾದ್ನಿಂದ 90 ಕಿ.ಮೀ. ದೂರದ ಜನಗಾಮ್ದಲ್ಲಿ ಪಕ್ಷದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೆಸಿಆರ್, ‘ಕೇಂದ್ರವು ತೆಲಂಗಾಣಕ್ಕೆ ರೈಲ್ವೆ ಕೋಚ್ ಫ್ಯಾಕ್ಟರಿಯಿಂದ ಹಿಡಿದು ವೈದ್ಯಕೀಯ ಕಾಲೇಜುಗಳು ಹಾಗೂ ನೀರಾವರಿ ಯೋಜನೆಗಳ ತನಕ ಹಲವು ಯೋಜನೆಗಳನ್ನು ನಿರಾಕರಿಸುತ್ತಿದೆ. ನಾವು ನಿಮ್ಮ (ಮೋದಿ) ವಿರುದ್ಧ ಬಂಡಾಯವೆದ್ದು ಹೋರಾಡುತ್ತೇವೆ. ನಾವು ದೆಹಲಿಯ ಕೋಟೆ ಗೋಡೆಗಳನ್ನು ಒಡೆಯುತ್ತೇವೆ’ ಎಂದು ಕಿಡಿಕಾರಿದರು.