ಶ್ರೀನಗರ: ‘ಹವಾಮಾನ ವೈಪರೀತ್ಯದಿಂದಾಗಿ ಪಂಚತಾರಿಣಿ ಹಾಗೂ ಪವಿತ್ರ ಗುಹಾಲಯ ನಡುವಣದ ಅಮರನಾಥ ಯಾತ್ರೆಯನ್ನು ರದ್ದುಪಡಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಅಮರನಾಥ ಗುಹಾಲಯದ ಪರ್ವತ ಶ್ರೇಣಿ ಹಾಗೂ ಇತರ ಪರ್ವತ ಶ್ರೇಣಿಗಳಲ್ಲಿ ಮಂಗಳವಾರ ಮಧ್ಯಾಹ್ನದಿಂದ ವಿಪರೀತ ಮಳೆಯಾಗುತ್ತಿದ್ದು, ಹತ್ತಿರದ ಹೊಳೆಯಲ್ಲಿ ನಿರಿನ ಮಟ್ಟವೂ ಅಧಿಕವಾಗುತ್ತಿದೆ’ ಎಂದು ಅವರು ಹೇಳಿದರು.
‘ಭಕ್ತರು ಪಂಚತಾರಿಣಿ ಶಿಬಿರಕ್ಕೆ ಮರಳುತ್ತಿದ್ದಾರೆ. ಮಳೆಯಿಂದಾಗಿ ಯಾವುದೇ ಪ್ರಾಣಹಾನಿ, ಗಾಯಾಳುಗಳು ಅಥವಾ ಆಸ್ತಿ ನಾಶದಂತಹ ಪ್ರಕರಣಗಳು ವರದಿಯಾಗಿಲ್ಲ’ ಎಂದೂ ಅವರು ಮಾಹಿತಿ ನೀಡಿದರು.